ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Last Updated 24 ಏಪ್ರಿಲ್ 2014, 20:04 IST
ಅಕ್ಷರ ಗಾತ್ರ

ಯಲಹಂಕ: ಡಾ.ರಾಜ್‌ಕುಮಾರ್‌ ಅವರ 86ನೇ ಹುಟ್ಟುಹಬ್ಬದ ಅಂಗ­ವಾಗಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯ­ಕರ್ತರು ಹಾಗೂ ಉಪನಗರದ ಧ್ರುವ­ತಾರೆ ಡಾ.ರಾಜ್‌­ಕುಮಾರ್‌ ಅಭಿಮಾನಿ­ಗಳ ಸಂಘದ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ಮತ್ತು ಬ್ರೆಡ್‌ ವಿತರಿಸಲಾಯಿತು.

ಮಾಜಿ ನಗರಸಭಾ ಸದಸ್ಯ ಕೆ.ವಿಜಯಕುಮಾರ್‌, ಯಲಹಂಕ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಎನ್‌.ಎಂ.ಶ್ರೀನಿವಾಸ್‌, ಮುಖಂಡರಾದ ಎನ್‌.ತಿಮ್ಮರಾಜು, ಪ್ರಸನ್ನಬಾಬು, ಸಂಘದ ಅಧ್ಯಕ್ಷ ಎಚ್‌.ಎಂ. ರಾಜು ಇತರರು ಹಾಜರಿದ್ದರು.

ಬೃಹತ್‌ ಕೇಕ್‌ ಕತ್ತರಿಸಿ ಆಚರಣೆ: ಯಲಹಂಕ ಹಳೇನಗರದ ಬಜಾರ್‌ ರಸ್ತೆಯಲ್ಲಿ ರಣಧೀರ ಕಂಠೀರವ ಡಾ.ರಾಜ್‌ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಡಾ.ರಾಜ್‌ಕುಮಾರ್‌ ಅವರ 86ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಸಕ ಎಸ್‌.ಆರ್‌.ವಿಶ್ವನಾಥ್‌, ಧ್ವಜಾರೋಹಣ ನೆರವೇರಿಸಿದರು. ನಂತರ ಡಾ.ರಾಜ್‌ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಅಭಿಮಾನಿಗಳು, ಕೇಕ್‌ ಕತ್ತರಿಸಿ ಹಂಚುವ ಮೂಲಕ ಸಂಭ್ರಮಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಬಿಬಿಎಂಪಿ ಸದಸ್ಯ ವೈ.ಎನ್‌.ಅಶ್ವಥ್‌, ಕೆಪಿಸಿಸಿ ಸದಸ್ಯ ಮು.ಕೃಷ್ಣಮೂ ರ್ತಿ, ಸಂಘದ ಅಧ್ಯಕ್ಷ ಶೇಖರ್‌, ಉಪಾಧ್ಯಕ್ಷ ಭಾಸ್ಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT