ಇಸ್ಲಾಮಾಬಾದ್(ಪಿಟಿಐ): ಮುಂಬೈ ದಾಳಿಯ ಪ್ರಮುಖ ಸಂಚುಕೋರ ಝಕೀವುರ್ ರೆಹಮಾನ್ ಲಖ್ವಿಗೆ ‘ಗಂಭೀರ ಜೀವ ಬೆದರಿಕೆ’ ಇರುವ ಕಾರಣ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಬುಧವಾರ ನೇರ ಹಾಜರಾತಿಗೆ ವಿನಾಯಿತಿ ನೀಡಿದೆ.
‘ವಿಚಾರಣೆ ನಡೆಸಿದ ಭಯೋತ್ಪಾ ದನಾ ನಿಗ್ರಹ ನ್ಯಾಯಾಲಯವು ಲಖ್ವಿಗೆ ಭದ್ರತೆಯ ಆಧಾರದಲ್ಲಿ ನೇರ ಹಾಜರಾತಿಗೆ ವಿನಾಯಿತಿ ನೀಡಿದೆ’ ಎಂದು ಸುದ್ದಿಗಾರರಿಗೆ ಲಖ್ವಿ ಪರ ವಕೀಲ ರಜಾ ರಿಜ್ವಾನ್ ಅಬ್ಬಾಸಿ ತಿಳಿಸಿದ್ದಾರೆ. ‘ಇಸ್ಲಾಮಾಬಾದ್ ಪೊಲೀಸ್ ಮಹಾ
ನಿರೀಕ್ಷಕರು ‘ಲಖ್ವಿಗೆ ಗಂಭೀರ ಜೀವ ಬೆದರಿಕೆ’ಯ ಬಗ್ಗೆ ವರದಿ ನೀಡಿದ ನಂತರ ಲಖ್ವಿಯ ಅರ್ಜಿಯನ್ನು ಅಂಗೀಕರಿಸಿದೆ’ ಎಂದು ಅಬ್ಬಾಸಿ ತಿಳಿಸಿದರು.