ಜಮ್ಮು (ಪಿಟಿಐ): ನೆರೆಪೀಡಿತ ಲಡಾಖ್ನ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 400 ಪ್ರವಾಸಿಗರನ್ನು ಯೋಧರು ರಕ್ಷಿಸಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ಪ್ರದೇಶಗಳಲ್ಲಿಯೂ ಸೇನಾ ಪಡೆಗಳು ವ್ಯಾಪಕ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿವೆ’ ಎಂದು ಸೇನೆಯ ಉತ್ತರ ಕಮಾಂಡ್ನ ರಕ್ಷಣಾ ವಕ್ತಾರ ಎಸ್.ಡಿ. ಗೋಸ್ವಾಮಿ ಅವರು ತಿಳಿಸಿದ್ದಾರೆ.
‘ಭಾರಿ ಮಳೆ, ಪ್ರವಾಹದಿಂದಾಗಿ ಕಳೆದ ತಿಂಗಳಿನಿಂದ ಲಡಾಖ್ನ ಬಹುತೇಕ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ರಸ್ತೆ, ಸೇತುವೆಗಳು ಗಳು ಕೊಚ್ಚಿಹೋಗಿದ್ದು ಹಳ್ಳಿಗಳ ನಡುವೆ ಸಂಪರ್ಕ ಕಡಿದುಹೋಗಿವೆ’ ಎಂದು ಅವರು ಹೇಳಿದ್ದಾರೆ.
ತಿಂಗಳಿನಿಂದ ಸತತ ಕಾರ್ಯಾಚರಣೆ ನಡೆಸಿದ ಸೇನೆ, ಉಪ್ಷಿ ಮತ್ತು ಖಲ್ಸಾರ್ ಪ್ರದೇಶಗಳಲ್ಲಿ ಸಿಲುಕಿದ್ದ ಸುಮಾರು 400 ಪ್ರವಾಸಿಗರನ್ನು ಸುರಕ್ಷಿತವಾಗಿ ಹೊರಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ.