ದೀಪಾವಳಿಯ ಶುಭ ಸಂದರ್ಭದಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ, ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಜನ್ಮದಿನವನ್ನು ಸಾವಿರಾರು ಮಂದಿ ವಿಧವೆಯರು ಲಕ್ಷ್ಮೀ ಪೂಜೆ ಮಾಡುವ ಮೂಲಕ ಸಮಾಜ ಪರಿವರ್ತನಾ ಕಾರ್ಯಕ್ರಮವಾಗಿ ನಿರಂತರವಾಗಿ ಸಾಗುತ್ತಿರುವುದು ಸಂತಸದ ವಿಷಯ. ಇದಕ್ಕಾಗಿ ಪೂಜಾರಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಈ ಪ್ರಯತ್ನವು ಇತರರಿಗೆ ಸ್ಫೂರ್ತಿ ನೀಡಲಿ ಎಂಬುದೇ ನನ್ನ ಆಶಯ.
ನಮ್ಮ ಸಮಾಜ ಇಂದು ಇನ್ನೊಂದು ಬಹುಮುಖ್ಯ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. ಅದುವೇ ವಿಧವಾ ವಿವಾಹ. ಮದುವೆಯಾಗಲು ಇಚ್ಛಿಸುವ ವಿಧವೆಯರು ಹಾಗೂ ಯುವಕರ ಸಮಾವೇಶವನ್ನು ಏರ್ಪಡಿಸಿ, ಮದುವೆಯಾಗ ಬಯಸುವವರನ್ನು ಒಂದುಗೂಡಿಸಿ, ಅವರ ವಿವಾಹ ಮಹೋತ್ಸವವನ್ನು ಸಾರ್ವಜನಿಕವಾಗಿ ಏರ್ಪಡಿಸುವ ಮೂಲಕ ಧಾರ್ಮಿಕ–ಸಾಮಾಜಿಕ ಕ್ರಾಂತಿಯನ್ನು
ಸಮಾಜದಲ್ಲಿ ಮಾಡಬೇಕಾಗಿದೆ. ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಈ ಸಾಮಾಜಿಕ ಕ್ರಾಂತಿಯಲ್ಲಿ ಪಾಲ್ಗೊಳ್ಳಬೇಕು.
–ದಿವಾಣ ಗೋಪಾಲಕೃಷ್ಣ ಭಟ್, ಉಡುಪಿ