ಮಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಕೇರಳದ ಕಾಸರಗೋಡು ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಹವ್ಯಕ ಭಾಷೆಯ (ಹವಿಗನ್ನಡ) ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ವಾರ್ಷಿಕವಾಗಿ ನಡೆಸುವ ರಾಜ್ಯಮಟ್ಟದ ‘ವಿಷು ವಿಶೇಷ ಸ್ಪರ್ಧೆ’ಗೆ ಪ್ರವೇಶಗಳನ್ನು ಆಹ್ವಾನಿಸಲಾಗಿದೆ.
ಪ್ರಬಂಧ, ಕಥೆ, ಕವಿತೆ, ನಗೆಬರಹ ಮತ್ತು ಛಾಯಾಚಿತ್ರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪ್ರವೇಶ-ಗಳನ್ನು ಕಳುಹಿಸಲು ಮಾರ್ಚ್ 3 ಕೊನೆಯ ದಿನ. ಎಲ್ಲ ಬರಹಗಳು ಹವ್ಯಕ ಭಾಷೆಯಲ್ಲಿ (ಕನ್ನಡ ಲಿಪಿ) ಇರಬೇಕಾದುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ www.oppanna.org ವೆಬ್ಸೈಟ್ಗೆ ಭೇಟಿ ನೀಡಬಹುದು.
ಸಂಪರ್ಕ ವಿಳಾಸ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), `ಅನುಗ್ರಹ', ಶಿವಗಿರಿ ನಗರ, ಕುಳಾಯಿ-ಹೊಸ-ಬೆಟ್ಟು, ಮಂಗಳೂರು– - 575019. ಮೊಬೈಲ್: 08547245304, 09449806563