ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದೇಹಿಗೆ ಸಂದೇಶ ಸಾಹಿತ್ಯ ಪ್ರಶಸ್ತಿ

Last Updated 29 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡ­ಲಾಗುವ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ಗೆ ಈ ಬಾರಿ ಸಾಹಿತಿ ವೈದೇಹಿ ಅವರು ಆಯ್ಕೆಯಾಗಿದ್ದಾರೆ. ಸಂದೇಶ ಚಲನ­ಚಿತ್ರ ಪ್ರಶಸ್ತಿಯನ್ನು ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ನೀಡಲಾಗುವುದು.

‘ಸಂದೇಶ ಪ್ರಶಸ್ತಿ–2014’ ಪ್ರದಾನ ಸಮಾರಂಭ ಜ. 15 ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜ ಅವರು ಶುಕ್ರ­ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿರಿಲ್‌ ಜೆ.ಸಿಕ್ವೇರಾ ಅವರಿಗೆ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಲಲಿತಾ ರೈ  (ತುಳು ಸಾಹಿತ್ಯ), ರಂಗಾಯಣದ ಮಾಜಿ ಅಧ್ಯಕ್ಷ ಡಾ.ಬಿ.­ವಿ. ರಾಜಾ­ರಾಮ್‌  (ಮಾಧ್ಯಮ), ಅಂಕಣ­ಕಾರ ಅಬ್ದುಲ್‌ ರಶೀದ್‌ (ಪತ್ರಿಕೋದ್ಯಮ), ಲಾರೆನ್ಸ್‌ ಸಲ್ಡಾನ (ಕೊಂಕಣಿ ಸಂಗೀತ), ಐರಿನ್‌ ಮಸ್ಕರೇನಸ್‌ (ಉತ್ತಮ ಶಿಕ್ಷಕಿ) ಹಾಗೂ ವೈಟ್‌ ಡಾವ್ಸ್‌ ಸಂಸ್ಥೆಗೆ (ವಿಶೇಷ ಪ್ರಶಸ್ತಿ ) ನೀಡಿ ಗೌರವಿಸ­ಲಾಗುವುದು ಎಂದರು.  ಪ್ರಶಸ್ತಿಯು ತಲಾ ₨ ಹತ್ತು ಸಾವಿರ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT