ಭೋಪಾಲ್(ಪಿಟಿಐ): ಸುಪ್ರೀಂಕೋರ್ಟ್ನ ಉಸ್ತುವಾರಿಯಲ್ಲಿ ವ್ಯಾಪಂ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ತಂಡ ಸೋಮವಾರ ಭೋಪಾಲ್ಗೆ ಬಂದಿಳಿದಿದೆ.
ಸಿಬಿಐ ತಂಡ ಮಧ್ಯಪ್ರದೇಶ ಪೊಲೀಸರು ಹಾಗೂ ಮಧ್ಯಪ್ರದೇಶ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ(ಎಸ್ಐಟಿ) ಜತೆ ಪ್ರಕರಣದ ಕುರಿತು ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವನ್ನು ಸಿಬಿಐಗೆ ವಹಿಸಿದ್ದ ಸುಪ್ರೀಂಕೋರ್ಟ್, ಮಧ್ಯಪ್ರದೇಶ ವೃತ್ತಿ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ, ದಂತ ವೈದ್ಯಕೀಯ ಪರೀಕ್ಷೆಯ ಹಗರಣ ಪ್ರಕರಣಗಳು ಸೇರಿದಂತೆ ಎಸ್ಐಟಿ ಈವರೆಗೆ ನಡೆಸಿರುವ ಪ್ರಕರಣಗಳ ದಿನವಹಿ ಮಾಹಿತಿಯನ್ನು ಸಿಬಿಐಗೆ ನೀಡುವಂತೆ ಜುಲೈ 9ರಂದು ಸೂಚನೆ ನೀಡಿತ್ತು. ಸಿಬಿಐ ಈ ಮಾಹಿತಿಯನ್ನು ಕಲೆಹಾಕಿ ತನಿಖೆ ಮುಂದುವರೆಸಲಿದೆ ಎಂದು ಮೂಲಗಳು ತಿಳಿಸಿವೆ.