ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ!
ಶ್ರೀನಗರ (ಪಿಟಿಐ): ಫಲಕ, ಬ್ಯಾನರ್ ಮತ್ತು ರ್ಯಾಲಿಗಳ ಮೂಲಕ ಚುನಾವಣೆ ಪ್ರಚಾರ ಕೈಗೊಳ್ಳುವುದಕ್ಕೆ ಭಾರಿ ನಿರ್ಬಂಧ ಕಂಡುಬಂದ ಕಾರಣ ಎಲ್ಲಾ ರಾಜಕೀಯ ಪಕ್ಷಗಳು ಇಲ್ಲಿ ಜನರ ಓಲೈಕೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿವೆ.
ಯುಪಿಎಸ್ಸಿ ಅಧ್ಯಕ್ಷ ದೀಪಕ್ ಗುಪ್ತ
ನವದೆಹಲಿ (ಪಿಟಿಐ): ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಹೊಸ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ದೀಪಕ್ ಗುಪ್ತ ಅವರನ್ನು ಸರ್ಕಾರ ನೇಮಿಸಿದೆ. ಆಯೋಗದ ಸದಸ್ಯರಲ್ಲೇ ಒಬ್ಬರನ್ನು ಯುಪಿಎಸ್ಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಂಪ್ರದಾಯ ಇತ್ತು. ಆದರೆ ಈಗ ಇದನ್ನು ಮುರಿದು, ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತ ಅವರ ಕಿರಿಯ ಸಹೋದರ ದೀಪಕ್ ಅವರನ್ನು ನೇಮಿಸಲಾಗಿದೆ.
ಅಸ್ಸಾಂನಲ್ಲಿ ಸ್ಫೋಟ: 1 ಸಾವು
ದಿಬ್ರುಗಡ, ಅಸ್ಸಾಂ (ಪಿಟಿಐ):ಇಲ್ಲಿನ ರಾಜ್ಗಡ ಪಟ್ಟಣದ ಮಾರುಕಟ್ಟೆಯೊಂದರಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿ ಕನಿಷ್ಠ ಒಬ್ಬ ಸತ್ತು, 27 ಮಂದಿ ಗಾಯಗೊಂಡಿದ್ದಾರೆ.