ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಸುದ್ದಿಗಳು

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ!
ಶ್ರೀನಗರ (ಪಿಟಿಐ):
ಫಲಕ, ಬ್ಯಾನರ್‌ ಮತ್ತು ರ್‍ಯಾಲಿಗಳ ಮೂಲಕ ಚುನಾವಣೆ ಪ್ರಚಾರ ಕೈಗೊ­ಳ್ಳು­ವುದಕ್ಕೆ ಭಾರಿ ನಿರ್ಬಂಧ ಕಂಡುಬಂದ ಕಾರಣ ಎಲ್ಲಾ ರಾಜಕೀಯ ಪಕ್ಷಗಳು ಇಲ್ಲಿ ಜನರ ಓಲೈಕೆಗೆ ಸಾಮಾಜಿಕ ಜಾಲ­ತಾಣಗಳ ಮೊರೆ ಹೋಗಿವೆ.

ಯುಪಿಎಸ್‌ಸಿ ಅಧ್ಯಕ್ಷ ದೀಪಕ್‌ ಗುಪ್ತ
ನವದೆಹಲಿ (ಪಿಟಿಐ):
ಕೇಂದ್ರ ಲೋಕ­ಸೇವಾ ಆಯೋಗದ (ಯುಪಿ­ಎಸ್‌ಸಿ) ಹೊಸ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ದೀಪಕ್‌ ಗುಪ್ತ ಅವರನ್ನು ಸರ್ಕಾರ ನೇಮಿಸಿದೆ.  ಆಯೋಗದ ಸದಸ್ಯರಲ್ಲೇ ಒಬ್ಬರನ್ನು ಯುಪಿಎಸ್‌ಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಂಪ್ರದಾಯ ಇತ್ತು. ಆದರೆ ಈಗ ಇದನ್ನು ಮುರಿದು, ಮಾಜಿ ಗೃಹ ಕಾರ್ಯದರ್ಶಿ ಮಧುಕರ್‌ ಗುಪ್ತ ಅವರ ಕಿರಿಯ ಸಹೋ­ದರ ದೀಪಕ್‌ ಅವರನ್ನು ನೇಮಿ­ಸ­ಲಾಗಿದೆ.

ಅಸ್ಸಾಂನಲ್ಲಿ ಸ್ಫೋಟ: 1 ಸಾವು
ದಿಬ್ರುಗಡ, ಅಸ್ಸಾಂ (ಪಿಟಿಐ):ಇಲ್ಲಿನ ರಾಜ್‌ಗಡ ಪಟ್ಟಣದ ಮಾರುಕಟ್ಟೆ­ಯೊಂದರಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿ ಕನಿಷ್ಠ ಒಬ್ಬ ಸತ್ತು, 27 ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT