ತುಳುನಾಡಿನ ಜನರು ನಿತ್ಯ ಬಳಸುತ್ತಿದ್ದ ಪರಿಕರಗಳು, ಕಂಬಳದ ಕೋಣಗಳು, ಅಂಕದ ಕೋಳಿ, ವಿಳ್ಯ -ತಾಂಬೂಲ, ಅಕ್ಕಿಮುಡಿ, ಬುಟ್ಟಿ ಹೆಣೆಯುವುದು, ಬಚ್ಚಲ ಕೋಣೆಯ ಪ್ರತಿರೂಪಗಳ ಪ್ರದರ್ಶನ ಹಾಗೂ ತುಳುಭಾಷೆಯ ಸಂಭಾಷಣೆಗಳು ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿದವು. ಈ ಪ್ರದರ್ಶನ ಜನ ಮಾನಸವನ್ನು ಗತಕಾಲಕ್ಕೆ ಮರುಳಿಸುವಂತೆ ಮಾಡಿತು.
ಸಾಣೂರು ದೆಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರುಗುತ್ತು ಪಠೇಲ್ ಸತೀಶ್ ಶೆಟ್ಟಿ, ಮಾಲಿನಿ ರೈ, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಎಸ್. ಕೋಟ್ಯಾನ್, ಮಧುಸೂಧನ್ ರೈ, ಪೃಥ್ವಿ ಯುವ ಬಾಂಧವೆರ್ನ ಅಧ್ಯಕ್ಷ ಅರುಣ್ ಡಿಸಿಲ್ವ, ಅಣ್ಣಪ್ಪ ಸ್ವಾಮಿ ಸ್ವ-ಸಹಾಯ ಸಂಘದ ಮಹೇಶ್, ವಿಶ್ವನಾಥ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬೆಳ್ವಾಯಿ ಘಟಕದ ಮುಖ್ಯಸ್ಥೆ ಸವಿತಾ, ಸೇವಾನಿರತೆ ಅರುಣಿ, ಕೃಷಿಕರಾದ ವಾರಿಜಾ ಶೆಡ್ತಿ, ತೀರ್ಥಲ್ಲ ವಾಸು ಶೆಟ್ಟಿ, ಚಂದ್ರಶೇಖರ್ ಪೂಜಾರಿ ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.