ಕಲಬುರ್ಗಿ: ಇಲ್ಲಿಯ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಿಂದ ಕೊಡಮಾಡುವ, ಹಸ್ತಪ್ರತಿಯಲ್ಲಿರುವ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಕಟಿಸಲಾಗಿದೆ.
ಪ್ರಸಕ್ತ ವರ್ಷ ಆರಂಭಿಸಿರುವ ಈ ಪ್ರಶಸ್ತಿಗೆ ಬೆಳಗಾವಿಯ ಶಶಿಧರ ಜೇರೆ ಅವರ ‘ಅನುರಾಗ’ (ಕಾದಂಬರಿ), ಬೆಂಗಳೂರಿನ ಡಾ.ವಂದನಾ ಅವರ ‘ಸಪ್ತಕ’ (ಪ್ರಬಂಧಗಳು), ಬಾಗಲಕೋಟೆ ಜಿಲ್ಲೆ ತೇರದಾಳದ ಎಸ್.ಆರ್. ರಾವಳ ಅವರ ‘ಗುಡುಸಾಬನ ಗೂಡಂಗಡಿ’ (ಕಥಾ ಸಂಕಲನ) ಹಸ್ತಪ್ರತಿಗಳು ಆಯ್ಕೆಯಾಗಿವೆ ಎಂದು ಪ್ರಕಾಶಕ ಬಸವರಾಜ ಕೊನೇಕ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ ₨5 ಸಾವಿರ ನಗದು ಒಳಗೊಂಡಿದೆ. 2015ರ ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಮೂವರ ಕೃತಿಗಳನ್ನು ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.