ನವದೆಹಲಿ: ಕನ್ನಡಿಗರಾದ ಹಿರಿಯ ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಉಪರಾಷ್ಟ್ರಪತಿ ಎಂ.ಹಮೀದ್ ಅನ್ಸಾರಿ ಅವರ ನೇತೃತ್ವದ ಮೂವರ ಸಮಿತಿಯು ಮೂರು ವರ್ಷಗಳ ಪೂರ್ಣಾವಧಿಗೆ ಈ ನೇಮಕ ಮಾಡಿದೆ.
ದೆಹಲಿ ಮೂಲದ ಚಿಂತಕರ ಕೂಟವಾದ ವಿವೇಕಾನಂದ ಅಂತರರಾಷ್ಟ್ರೀಯ ಪ್ರತಿಷ್ಠಾನದಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಅವರು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಮೃಣಾಲ್ ಪಾಂಡೆ ಅವರು ಏ.೩೦ರಂದು ತಮ್ಮ ಅವಧಿಯನ್ನು ಮುಗಿಸಿದಾಗಿನಿಂದ ಈ ಸ್ಥಾನ ಖಾಲಿ ಇತ್ತು.