ನವದೆಹಲಿ (ಐಎಎನ್ಎಸ್): ನೂತನ ಸೇನಾ ಮುಖ್ಯಸ್ಥರ ನೇಮಕಕ್ಕೆ ಒಪ್ಪಿಗೆ ನೀಡದಂತೆ ಬಿಜೆಪಿ ಮುಖಂಡ ಸುಬ್ರಮಣಿಯನ್್ ಸ್ವಾಮಿ, ರಾಷ್ಟ್ರಪತಿ ಪ್ರಣವ್್ ಮುಖರ್ಜಿ ಅವರನ್ನು ಒತ್ತಾಯಿಸಿದ್ದಾರೆ. ‘ಈ ಸಮಯದಲ್ಲಿ ನೇಮಕ ಮಾಡಿದರೆ ಅದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತದೆ ಮತ್ತು ಸೇನಾಪಡೆಯ ನೈತಿಕ ಸ್ಥೈರ್ಯ ಕುಂದುತ್ತದೆ’ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಸ್ವಾಮಿ ತಿಳಿಸಿದ್ದಾರೆ.