ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಂಟರು ಒಗ್ಗೂಡಿ ಬಲಿಷ್ಠ ಸಮಾಜ ನಿರ್ಮಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಕರೆ ನೀಡಿದ್ದು ಸುದ್ದಿಯಾಗಿತ್ತು. ಇದನ್ನು ಓದಿ ತುಂಬ ಅಚ್ಚರಿಯಾಯಿತು. ವ್ಯಕ್ತಿಯೊಬ್ಬ ಸನ್ಯಾಸ ಸ್ವೀಕರಿಸಿ ಸ್ವಾಮಿಯಾದ ನಂತರ ಅವರ ಪೂರ್ವಾಶ್ರಮದ ಜಾತಿಯೊಡನೆ ವಿಶಿಷ್ಟ ಸಂಬಂಧ, ಅಭಿಮಾನ ಇರಿಸುವುದು ನ್ಯಾಯವೇ? ಜಾತಿಯ ಸಂಬಂಧ ಕಳಚಿಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ವಿವಿಧ ಕೋಮುಗಳ ಸ್ವಾಮಿಗಳು ಜಾತಿಗಳ ಒಗ್ಗಟ್ಟಿಗೆ ಕರೆ ಕೊಡುವುದು ಅನುಚಿತ ಎನ್ನದೆ ವಿಧಿಯಿಲ್ಲ.