ಬೆಂಗಳೂರು: ವಿದ್ಯಾರಣ್ಯಪುರ ಹಾಕಿ ಕ್ಲಬ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್.ಮೂರ್ತಿ ಹಾಗೂ ವಿ.ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ.
ಅಕ್ಕಿತಿಮ್ಮನಹಳ್ಳಿಯಲ್ಲಿರುವ ಕೆಎಸ್ಎಚ್ಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವಿದ್ಯಾರಣ್ಯಪುರ ತಂಡ 8–1 ಗೋಲುಗಳಿಂದ ನ್ಯೂ ಅಶೋಕ ಹಾಕಿ ಕ್ಲಬ್ ತಂಡವನ್ನು ಮಣಿಸಿತು. ವಿಜಯಿ ತಂಡದ ರೋಶನ್ ಸೋಮಯ್ಯ (4ನೇ ನಿಮಿಷ), ಅವಿನಾಶ್ (12ನೇ ನಿ.), ಮನೋಜ್ (20ನೇ ನಿ.), ಅನಿಲ್ (24ನೇ ನಿ.), ಶಾವೀನ್ ಸೋಮಣ್ಣ (41ನೇ ನಿ.), ಪ್ರಭು (46ನೇ ನಿ.), ಸಂತೋಷ್ (56ನೇ ಹಾಗೂ 59ನೇ ನಿ,) ಗೋಲು ಗಳಿಸಿದರು. ಸೋಲು ಕಂಡ ನ್ಯೂ ಅಶೋಕ ತಂಡದ ಲಿಯೋನ್ ಜಾನ್ಸನ್ 53ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.
ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಹಾಕಿ ಕ್ಲಬ್ ತಂಡದವರು 6–0 ಗೋಲುಗಳಿಂದ ಕೆಜಿಎಫ್ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ಎದುರು ಜಯ ಗಳಿಸಿದರು.