ಮಹಾಬೋಧಿ ಮಂದಿರಕ್ಕೆ ಶನಿವಾರ ಭೇಟಿ ನೀಡಿದ ಅವರು, ಬುದ್ಧಗಯಾ ಭಾರತ ಮತ್ತು ಬೌದ್ಧ ಜಗತ್ತಿನ ನಡುವೆ ನಾಗರಿಕತೆಯ ಬೆಸುಗೆಯಾಗಲಿದೆ. ಈ ಸ್ಥಳವನ್ನು ಆಧ್ಯಾತ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಭಾರತ ಎಲ್ಲ ಸಹಕಾರ ನೀಡಲಿದೆ ಎಂದರು.
‘ಬುದ್ಧ, ಹಿಂದೂಧರ್ಮದ ಸುಧಾರಕ ಮಾತ್ರವಲ್ಲ, ಇಡೀ ವಿಶ್ವದ ಪರಿವರ್ತಕ. ಇಡೀ ಪ್ರಪಂಚಕ್ಕೆ ಹೊಸ ದೃಷ್ಟಿಕೋನವನ್ನು ನೀಡಿದ ವ್ಯಕ್ತಿ ಅವರು. ಕೃಷ್ಣ ಜನ್ಮಾಷ್ಠಮಿ ದಿನದಂದೇ ಬುದ್ಧಗಯಾದಲ್ಲಿರಲು ಸಂತಸ ಎನಿಸುತ್ತಿದೆ ಎಂದು ಅವರು ಹೇಳಿದರು.