‘ತಿಹಾರ್ ಜೈಲಿನಲ್ಲಿದ್ದಾಗ ಶ್ರೀಶಾಂತ್ ಮೇಲೆ ಕೊಲೆ ಯತ್ನ ನಡೆದಿತ್ತು. ಬಾಗಿಲಿನ ಚಿಲಕವನ್ನೇ ಚೂಪಾದ ಆಯುಧವಾಗಿ ಮಾಡಿಕೊಂಡಿದ್ದ ರೌಡಿಯೊಬ್ಬ ಶ್ರೀಶಾಂತ್ ಕೊಲೆ ಮಾಡಲು ಯತ್ನಿಸಿದ್ದ. ಆದರೆ, ಅದೃಷ್ಟವಶಾತ್ ಶ್ರೀಶಾಂತ್ ಅದರಿಂದ ಪಾರಾಗಿದ್ದರು’ ಎಂದು ಬಾಲಕೃಷ್ಣನ್ ಮಲಯಾಳಂ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಬಾಲಕೃಷ್ಣನ್ ಅವರು ಶ್ರೀಶಾಂತ್ ಅವರ ಹಿರಿಯ ಸಹೋದರಿಯನ್ನು ಮದುವೆಯಾಗಿದ್ದಾರೆ. ತಿಹಾರ್ ಜೈಲಿನಲ್ಲಿದ್ದ ಅನುಭವದ ಮಾನಸಿಕ ಹಿಂಸೆಯಿಂದ ಭಾವ ಇನ್ನೂ ಪೂರ್ಣವಾಗಿ ಹೊರಬಂದಿಲ್ಲ ಎಂದು ಬಾಲಕೃಷ್ಣನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಘಟನೆಯ ಬಗ್ಗೆ ಶ್ರೀಶಾಂತ್ ಆಗಲಿ ಅಥವಾ ಅವರ ಕುಟುಂಬವಾಗಲಿ ಪೊಲೀಸರಿಗೆ ಯಾವುದೇ ದೂರನ್ನು ನೀಡಿಲ್ಲ ಎಂದೂ ಅವರು ತಿಳಿಸಿದರು.