ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ಮೆಚ್ಚಿನ ಕೃತಿ’ ಸ್ಪರ್ಧೆ

Last Updated 7 ಸೆಪ್ಟೆಂಬರ್ 2014, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಯುವಕರನ್ನು ಪುಸ್ತಕದ ಓದಿನತ್ತ ಸೆಳೆಯಲು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ನನ್ನ ಮೆಚ್ಚಿನ ಕೃತಿ’ ವಿಷಯದ ಬಗ್ಗೆ ಸ್ಪರ್ಧೆ ಏರ್ಪಡಿಸಲಾಗುವುದು ಮತ್ತು ಪ್ರತಿ ಜಿಲ್ಲೆಗಳಲ್ಲಿ ‘ಪುಸ್ತಕ ಪ್ರೇಮಿಗಳ ಬಳಗ’ ಸ್ಥಾಪಿಸಿ ಸಾಂಸ್ಕೃತಿಕ ಕಾರ್ಯ­ಕ್ರ­ಮ­ಗಳನ್ನು ನಡೆಸಲಾ­ಗುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ‘ಹ್ಯಾಪಿ ಕ್ಲಬ್‌ ಇವೆಂಟ್ಸ್‌’ ವತಿಯಿಂದ ಕರ್ನಾಟಕ ಪುಸ್ತಕೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಯುವಜನತೆ ಮತ್ತು ವಾಚನಾಭಿ­ರುಚಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ‘ಸಂಸ್ಕೃತಿ, ಸಾಹಿತ್ಯ, ಸಮಾಜದ ಕುರಿತ ಯುವಕರ ಓದು ಕಡಿಮೆಯಾ­ಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ­ಗಳಿಗೆ ಸಂಬಂಧಿಸಿದ ಪುಸ್ತಕ­ಗಳನ್ನು ಯುವ­ಕರು ಹೆಚ್ಚು ಓದುತ್ತಿ­ದ್ದಾರೆ. ಯುವಕ­ರನ್ನು ಮರಳಿ ಓದಿನತ್ತ ಆಕರ್ಷಿಸಲು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ­ಲಾಗುತ್ತಿದೆ’ ಎಂದರು.

‘80ರ ದಶಕದಲ್ಲಿ ಯಂಡಮೂರಿ ವಿರೇಂದ್ರನಾಥ್‌ ಹಣ ಗಳಿಸುವುದು ಹೇಗೆ, ಯಶಸ್ಸು ಸಾಧಿಸುವುದು ಹೇಗೆ ಎಂಬ ಅಸಂಬದ್ಧ ಕೃತಿಗಳ ರಚನೆಗೆ   ನಾಂದಿ ಹಾಡಿದರು. ಆ ಪರಂಪರೆ ಇಂದಿಗೂ ಮುಂದುವರೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಬಿಟ್ಟರೆ ಬೇರೆ ಸಾಹಿತ್ಯ ಗೊತ್ತಿಲ್ಲ. ಅವರು ಸಂವೇದನಾಶೀಲ ಸಾಹಿತ್ಯವನ್ನು ಓದುವ ವಾತಾವರಣ ನಿರ್ಮಾಣ ಮಾಡಬೇಕು’ ಎಂದರು.

ಹಿರಿಯ ಸಾಹಿತಿ ಡಾ.ಕೆ. ಮರುಳ­ಸಿದ್ದಪ್ಪ ಮಾತನಾಡಿ, ‘ಇದು ಎಲೆ­ಕ್ಟ್ರಾ­ನಿಕ್‌ ಮಾಧ್ಯಮಗಳ ಯುಗ. ಯುವ­ಕರು ಸಾಮಾಜಿಕ ಜಾಲತಾಣ­ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಬೇರೆ ಬೇರೆ ಆಕರ್ಷಣೆಗಳ ನಡುವೆ ಅವರನ್ನು ಪುಸ್ತಕಗಳ ಓದಿನತ್ತ ಆಕರ್ಷಿಸುವ ಸವಾಲಿದೆ’ ಎಂದರು.

ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧ­ರಾಮಯ್ಯ ಮಾತನಾಡಿ, ‘ಬೇರೆ ಬೇರೆ ಸಂವೇದನಾ ನೆಲೆಗಳಿಂದ ಬಂದ ಹಲವು ಯುವ ಕವಿಗಳು ನಮ್ಮಲ್ಲಿದ್ದಾರೆ. ವಿಪ­ರ್ಯಾಸವೆಂದರೆ ಅವರ ಕವಿತೆಗಳನ್ನು ಓದದೆ ಟೀಕೆ ಮಾಡು­ವವರ ಸಂಖ್ಯೆ ಹೆಚ್ಚುತ್ತಿದೆ. ವಿಮರ್ಶಕರು ಸಹ ಅವ­ರನ್ನು ಕಡೆಗಣಿಸುತ್ತಿದ್ದಾರೆ’  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT