ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಲೆ ತೆಲಿಪಾಲೆ’– ಪ್ರಶಂಸಾ ತಂಡಕ್ಕೆ ಪ್ರಶಸ್ತಿ

Last Updated 1 ಜುಲೈ 2014, 9:24 IST
ಅಕ್ಷರ ಗಾತ್ರ

ಬಜ್ಪೆ:  ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಕಾಪುವಿನ ‘ಪ್ರಶಂಸಾ’ ತಂಡ ಪ್ರಥಮ ಪ್ರಶಸ್ತಿ­ಯೊಂದಿಗೆ ಎರಡು ಲಕ್ಷ ರೂಪಾಯಿ ನಗದನ್ನು ಗೆದ್ದುಕೊಂಡಿದೆ. ಸೀಸನ್ ಒಂದ­ರಲ್ಲೂ ಇದೇ ತಂಡ ಪ್ರಶಸ್ತಿಯನ್ನು ಗೆದ್ದಿತ್ತು.

ಶಾಸ್ತಾವು ಭೂತನಾಥೇಶ್ವರ ದೇವಳದ ಸನ್ನಿಧಿಯಲ್ಲಿ ಭಾನುವಾರ ನಮ್ಮ ಟಿವಿ ವಾಹಿನಿಯ ಸಹಭಾಗಿತ್ವ­ದಲ್ಲಿ ತುಳು ರಿಯಾಲಿಟಿ ಶೋ ಬಲೇ ತೆಲಿಪಾಲೆ ಸೀಸನ್ ಎರಡರ ಫೈನಲ್ ಪಂದ್ಯ ಜರಗಿತು. ಫೈನಲ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ತೆಲಿಕೆದ ತೆನಾಲಿ ಕಾರ್ಕಳ ₨1.50­ಲಕ್ಷ ಬಹುಮಾನದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು. ಶೋಭಾ ರೈ ನೇತೃತ್ವದ ತಂಡ ಒಂದು ಲಕ್ಷ ಬಹುಮಾ­ನದೊಂದಿಗೆ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. 75 ಸಾವಿರದ ನಾಲ್ಕನೇ ಪ್ರಶಸ್ತಿಯನ್ನು ಉಮೇಶ್ ಮೀಜಾರು ತಂಡ ಗಳಿಸಿದೆ.

ಐದನೇ ಸ್ಥಾನವನ್ನು 50 ಸಾವಿರ ನಗದಿನೊಂದಿಗೆ ಮಂಜು ರೈ ನೇತೃತ್ವದ ಸಾರಥಿ ಕುಡ್ಲ ಪಡೆದಿದೆ. ಆರನೇ ಸ್ಥಾನ 25 ಸಾವಿರ ನಗದಿನೊಂದಿಗೆ ಅಭಿನಯ ಉಡುಪಿ ಪ್ರಶಸ್ತಿಯನ್ನು ಗಳಿಸಿದೆ. ರಂಜನ್ ಬೋಳೂರು ಮತ್ತು ಅರುಣ್ ಚಂದ್ರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆ­ದು­ಕೊಂಡರು.

ಕಾರ್ಯಕ್ರಮದ ಪ್ರಧಾ­ನ ಸಂಘಟಕ ವಿಜಯನಾಥ ವಿಠಲ ಶೆಟ್ಟಿ, ನಮ್ಮ ಟಿ.ವಿ.ಯ ಮುಖ್ಯಸ್ಥ ಡಾ. ಶಿವ­ಚರಣ್ ಶೆಟ್ಟಿ, ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತೀರ್ಪುಗಾರ­ರಾ­ಗಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ಸಂಯೋಜಿಸಿದರು. ಪ್ರಥಮ ಪ್ರಶಸ್ತಿ ಪಡೆದ ಪ್ರಶಂಸ ಕಾಪು ತಂಡದಲ್ಲಿ ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ಮರ್ವಿನ್ ಅಭಿನಯಿಸಿದ್ದರು. ಶರತ್ ಉಚ್ಚಿಲ ಸಂಗೀತ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT