‘ನಮ್ಮ ಮೇಲೆ ಒತ್ತಡ ಹೆಚ್ಚಿದೆ. ಸಿಬಿಐ, ಭ್ರಷ್ಟಾಚಾರ ನಿಗ್ರಹ ದಳ, ಆದಾಯ ತೆರಿಗೆ ಇಲಾಖೆ ಮತ್ತು ದೆಹಲಿ ಪೊಲೀಸರಿಂದ ನಮ್ಮ ಮೇಲೆ ದಾಳಿ ಹಾಗೂ ವಿಚಾರಣೆ ಹೆಸರಿನಲ್ಲಿ ಒತ್ತಡ ಹೆಚ್ಚಾಗಿದೆ. ಇಷ್ಟೆಲ್ಲಾ ಇಲಾಖೆಗಳು ನಮ್ಮ ಬೆನ್ನತ್ತಿವೆ ಎಂದರೆ ಅದರ ಹಿಂದೆ ಯಾರದ್ದೋ ಕೈವಾಡ ಇರಲೇಬೇಕು. ಆ ಪ್ರಭಾವಿ ವ್ಯಕ್ತಿ ಯಾರು? ಅಮಿತ್ ಷಾ ಅವರೇ? ಮೋದಿಯವರೇ? ಪ್ರಧಾನಮಂತ್ರಿ ಕಚೇರಿಯೇ? ಮೋದಿ ಅವರ ನಿರ್ದೇಶನದ ಮೇರೆಗೆ ಅಮಿತ್ ಷಾ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.