<p>ಹುಬ್ಬಳ್ಳಿ: ‘ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಕಂಡು ಬರುವ ಮಾನವೀಯತೆಯ ದರ್ಶನವನ್ನು ವಿಶೇಷ ಹಿತಾಸಕ್ತಿಗಳು ಪ್ರಜ್ಞಾಪೂರ್ವಕವಾಗಿ ಕಡೆಗಣಿಸುತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ಕೆ.ರಾಘವೇಂದ್ರರಾವ್ ಹೇಳಿದರು.<br /> <br /> ಇಲ್ಲಿನ ಬಸವೇಶ್ವರನಗರದಲ್ಲಿರುವ ‘ವಿಶ್ವಶ್ರಮ ಚೇತನ’ದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೇಂದ್ರೆ ಸಂಸ್ಮರಣೆ–33 ಕಾರ್ಯಕ್ರಮದಲ್ಲಿ ‘ಬೇಂದ್ರೆ ಹಾಗೂ ಮಾನವೀಯತೆಯ ದರ್ಶನ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> ‘ಬೇಂದ್ರೆಯವರ ಜಾಗತಿಕ ದೃಷ್ಟಿಕೋನ ಹಾಗೂ ಸಾಹಿತ್ಯಿಕ ಕೃತಿಗಳು ಚಾರಿತ್ರಿಕ ಸಂಘರ್ಷವನ್ನು ಪ್ರತಿನಿಧಿಸುತ್ತಾ ಮಾನವೀಯತೆಯ ದರ್ಶನದೆಡೆಗೆ ಸಾಗುತ್ತದೆ. ಅಲ್ಲದೇ, ಮಾನವೀಯತೆಯ ದರ್ಶನವು ಮಾನವ, ಪ್ರಕೃತಿ ಹಾಗೂ ದೇವರು ಈ ತ್ರಿವಳಿಯ ನಡುವೆ ಒಂದು ಕೊಂಡಿಯನ್ನು ಸ್ಥಾಪಿಸಲು ಸಂಘರ್ಷ ಮಾಡುತ್ತಿರುವ ಪ್ರಕ್ರಿಯೆಯಲ್ಲಿರುವುದನ್ನು ಸಹ ಅವರ ಕಾವ್ಯಗಳಲ್ಲಿ ದೃಢಪಡುತ್ತದೆ’ ಎಂದೂ ವಿಶ್ಲೇಷಿಸಿದರು.<br /> <br /> ’ಬೇಂದ್ರೆಯವರ ಈ ಮಾನವೀಯತೆಯ ದರ್ಶನದ ಬೆಳಕನ್ನು ಬೆಳಗುವ ಅನಿವಾರ್ಯತೆ ಪ್ರಗತಿಪರ ಚಿಂತಕರ ಕರ್ತವ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.<br /> <br /> ನಂತರ ಅವರು ಬೇಂದ್ರೆಯವರ ಆಯ್ದ ಒಲವಿನ ಕವನಗಳನ್ನು ಒಳಗೊಂಡ ಸಂಗ್ರಹ ‘ಒಲವೇ ನಮ್ಮ ಬದುಕು’ ಎಂಬ ಕೃತಿಯನ್ನು ಇದೇ ಸಂದರ್ಭದಲ್ಲಿ ಅವರು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು.<br /> <br /> ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ಶರ್ಮಾ, ‘ಬೆಳಕಿನ ಮಹಾಪಥಿಕರಾಗಿದ್ದ ಬೇಂದ್ರೆಯವರು ದೀಪಾವಳಿಯಂದೇ ಬೆಳಕಿನಲ್ಲಿ ಲೀನವಾದರು. ಅವರ ಅಮರ ಸಾಹಿತ್ಯ, ಚಿಂತನೆಗಳ ಬೆಳಕು ಜಗತ್ತನ್ನು ಇಂದಿಗೂ ಬೆಳಗುತ್ತಿದೆ’ ಎಂದು ಬಣ್ಣಿಸಿದರು.<br /> <br /> ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.<br /> <br /> ಸಾಹಿತಿ ರಾಮಚಂದ್ರ ಅವರು ಬೇಂದ್ರೆಯವರ ‘ಸೂಸಲ ನಗೆಯ ಸೂಕ್ತಿಗಳು’ ಎಂಬ ಕವನವನ್ನು ವಾಚನ ಮಾಡಿದರು. ಸಂಸ್ಥೆಯ ಸಹ ನಿರ್ದೇಶಕ ಡಾ.ವಾಮನ ಬೇಂದ್ರೆ, ಸುಮಿತ್ರಾ ಪೋತ್ನಿಸ್, ಡಾ.ಶ್ಯಾಮಸುಂದರ ಬಿದರಕುಂದಿ, ಅಮ್ಯಂಬಾಳ ಆನಂದ, ಎಂ.ಡಿ.ಗೋಗೇರಿ, ಜಗದೀಶ ಮಂಗಳೂರುಮಠ, ವಿಕಾಸ ಸೊಪ್ಪಿನ, ಪ್ರೊ.ಚಂದ್ರಶೇಖರ ಯಾದವಾಡ ಉಪಸ್ಥಿತರಿದ್ದರು.<br /> ಪ್ರೊ.ರವೀಂದ್ರ ಶಿರೋಳ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಕಂಡು ಬರುವ ಮಾನವೀಯತೆಯ ದರ್ಶನವನ್ನು ವಿಶೇಷ ಹಿತಾಸಕ್ತಿಗಳು ಪ್ರಜ್ಞಾಪೂರ್ವಕವಾಗಿ ಕಡೆಗಣಿಸುತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ಕೆ.ರಾಘವೇಂದ್ರರಾವ್ ಹೇಳಿದರು.<br /> <br /> ಇಲ್ಲಿನ ಬಸವೇಶ್ವರನಗರದಲ್ಲಿರುವ ‘ವಿಶ್ವಶ್ರಮ ಚೇತನ’ದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೇಂದ್ರೆ ಸಂಸ್ಮರಣೆ–33 ಕಾರ್ಯಕ್ರಮದಲ್ಲಿ ‘ಬೇಂದ್ರೆ ಹಾಗೂ ಮಾನವೀಯತೆಯ ದರ್ಶನ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.<br /> <br /> ‘ಬೇಂದ್ರೆಯವರ ಜಾಗತಿಕ ದೃಷ್ಟಿಕೋನ ಹಾಗೂ ಸಾಹಿತ್ಯಿಕ ಕೃತಿಗಳು ಚಾರಿತ್ರಿಕ ಸಂಘರ್ಷವನ್ನು ಪ್ರತಿನಿಧಿಸುತ್ತಾ ಮಾನವೀಯತೆಯ ದರ್ಶನದೆಡೆಗೆ ಸಾಗುತ್ತದೆ. ಅಲ್ಲದೇ, ಮಾನವೀಯತೆಯ ದರ್ಶನವು ಮಾನವ, ಪ್ರಕೃತಿ ಹಾಗೂ ದೇವರು ಈ ತ್ರಿವಳಿಯ ನಡುವೆ ಒಂದು ಕೊಂಡಿಯನ್ನು ಸ್ಥಾಪಿಸಲು ಸಂಘರ್ಷ ಮಾಡುತ್ತಿರುವ ಪ್ರಕ್ರಿಯೆಯಲ್ಲಿರುವುದನ್ನು ಸಹ ಅವರ ಕಾವ್ಯಗಳಲ್ಲಿ ದೃಢಪಡುತ್ತದೆ’ ಎಂದೂ ವಿಶ್ಲೇಷಿಸಿದರು.<br /> <br /> ’ಬೇಂದ್ರೆಯವರ ಈ ಮಾನವೀಯತೆಯ ದರ್ಶನದ ಬೆಳಕನ್ನು ಬೆಳಗುವ ಅನಿವಾರ್ಯತೆ ಪ್ರಗತಿಪರ ಚಿಂತಕರ ಕರ್ತವ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.<br /> <br /> ನಂತರ ಅವರು ಬೇಂದ್ರೆಯವರ ಆಯ್ದ ಒಲವಿನ ಕವನಗಳನ್ನು ಒಳಗೊಂಡ ಸಂಗ್ರಹ ‘ಒಲವೇ ನಮ್ಮ ಬದುಕು’ ಎಂಬ ಕೃತಿಯನ್ನು ಇದೇ ಸಂದರ್ಭದಲ್ಲಿ ಅವರು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು.<br /> <br /> ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ಶರ್ಮಾ, ‘ಬೆಳಕಿನ ಮಹಾಪಥಿಕರಾಗಿದ್ದ ಬೇಂದ್ರೆಯವರು ದೀಪಾವಳಿಯಂದೇ ಬೆಳಕಿನಲ್ಲಿ ಲೀನವಾದರು. ಅವರ ಅಮರ ಸಾಹಿತ್ಯ, ಚಿಂತನೆಗಳ ಬೆಳಕು ಜಗತ್ತನ್ನು ಇಂದಿಗೂ ಬೆಳಗುತ್ತಿದೆ’ ಎಂದು ಬಣ್ಣಿಸಿದರು.<br /> <br /> ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.<br /> <br /> ಸಾಹಿತಿ ರಾಮಚಂದ್ರ ಅವರು ಬೇಂದ್ರೆಯವರ ‘ಸೂಸಲ ನಗೆಯ ಸೂಕ್ತಿಗಳು’ ಎಂಬ ಕವನವನ್ನು ವಾಚನ ಮಾಡಿದರು. ಸಂಸ್ಥೆಯ ಸಹ ನಿರ್ದೇಶಕ ಡಾ.ವಾಮನ ಬೇಂದ್ರೆ, ಸುಮಿತ್ರಾ ಪೋತ್ನಿಸ್, ಡಾ.ಶ್ಯಾಮಸುಂದರ ಬಿದರಕುಂದಿ, ಅಮ್ಯಂಬಾಳ ಆನಂದ, ಎಂ.ಡಿ.ಗೋಗೇರಿ, ಜಗದೀಶ ಮಂಗಳೂರುಮಠ, ವಿಕಾಸ ಸೊಪ್ಪಿನ, ಪ್ರೊ.ಚಂದ್ರಶೇಖರ ಯಾದವಾಡ ಉಪಸ್ಥಿತರಿದ್ದರು.<br /> ಪ್ರೊ.ರವೀಂದ್ರ ಶಿರೋಳ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>