ನವದೆಹಲಿ: ‘ಮಧ್ಯರಾತ್ರಿಯೂ ನಾನು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಲಭ್ಯವಿರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮನ್ನು ಭೇಟಿಯಾದ ಮುಸ್ಲಿಂ ನಿಯೋಗಕ್ಕೆ ಆಶ್ವಾಸನೆ ನೀಡಿದರು.
‘ಕೋಮು ಆಧಾರದಲ್ಲಿ ಜನರನ್ನು ಒಡೆಯುವ ರಾಜಕೀಯದಲ್ಲಿ ನಾನು ನಂಬಿಕೆ ಇಟ್ಟಿಲ್ಲ’ ಎಂದೂ ಅವರು ಹೇಳಿದರು.
ಇಮಾಮ್ ಉಮರ್ ಅಹ್ಮದ್ ಇಲಿಯಾಸ್ ನೇತೃತ್ವದಲ್ಲಿ 30 ಮುಖಂಡರು ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.