ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಾತಿಲಕ’ದ ಕೆಲಸ ಶುರು...

ಸಿನಿ ಹನಿ
Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಜುಗಾರಿ ಅವಿನಾಶ್ ನಾಯಕ ನಟನಾಗಿರುವ ‘ರಾಜಾತಿಲಕ’ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ತೆಲುಗಿನ ಬಾನುಶ್ರೀ ಹಾಗೂ ಕನ್ನಡದ ಹುಡುಗಿ ಗಾಯತ್ರಿ ಗೌಡ ನಾಯಕಿಯರು. ಮಂಜುನಾಥ್ ಈ ಸಿನಿಮಾದ ಮೂಲಕ ನಿರ್ದೇಶಕನ ಟೋಪಿ ತೊಡಲಿದ್ದಾರೆ. ಜೋಶ್ ಮತ್ತು ವೇಣುಗೋಪಾಲ್ ಹಣ ಹೂಡಿಕೆಗೆ ಮುಂದಾಗಿದ್ದಾರೆ.

ಕಳೆದ ವಾರ ಚಿತ್ರದ ಮಹೂರ್ತ ಸಮಾರಂಭವಿತ್ತು. ಮೊದಲು ಮಾತು ಆರಂಭಿಸಿದ ನಿರ್ದೇಶಕ ಮಂಜುನಾಥ್, ‘ಬಹಳ ವರ್ಷಗಳ ನಂತರ ನಿರ್ದೇಶಕನಾಗುತ್ತಿದ್ದೇನೆ. ಎರಡು ವರ್ಷಗಳಿಂದ ಕಥೆ, ಚಿತ್ರಕಥೆ ಸಿದ್ಧಪಡಿಸಿ ಅದನ್ನು ತಿದ್ದಿ ತೀಡಿ ಈಗ ಚಿತ್ರ ಮಾಡಲಾಗುತ್ತಿದೆ.

ಕನ್ನಡದಲ್ಲಿ ಇದುವರೆಗೂ ಎಲ್ಲಿಯೂ ಬಂದಿಲ್ಲದ ಕಥೆಯನ್ನು ಚಿತ್ರರೂಪವನ್ನಾಗಿ ತೆರೆಗೆ ತರುವ ಉದ್ದೇಶ ಹೊಂದಿದ್ದೇನೆ. ಅದಕ್ಕೆ ನಿರ್ಮಾಪಕರು ಸಾಥ್ ನೀಡಿದ್ದಾರೆ. ಚಿತ್ರೀಕರಣವನ್ನು ಮೇ ಮೊದಲ ವಾರದವರೆಗೂ ನಡೆಸಿ ಆ ಬಳಿಕ  ಜೂನ್ ಇಲ್ಲವೇ ಜುಲೈನಲ್ಲಿ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮಾಡಲಾಗುವುದು’ ಎಂದು ವಿವರಿಸಿದರು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಜನವರಿಯ ವೇಳೆಗೆ ಚಿತ್ರವನ್ನು ತೆರೆಗೆ ತರುವ ಉದ್ದೇಶ ಅವರದು.

‘ನಟ ಅವಿನಾಶ್ ಹಳ್ಳಿಯೊಂದರ ಮುಖ್ಯಸ್ಥನ ಮನೆಯ ಸದಸ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮನೆಯಲ್ಲಿನ ಘಟನೆಗಳು ಮತ್ತು ಆ ನಂತರ ಆತ ಪಟ್ಟಣಕ್ಕೆ ಬಂದಮೇಲೆ, ಇಲ್ಲಿಯ ರಾಜಕೀಯ... ಮುಂದೆ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು’ ಎಂದು ಕಥನದ ಎಳೆಯನ್ನು ಬಿಟ್ಟುಕೊಟ್ಟರು ಮಂಜುನಾಥ್‌.

ನಾಯಕಿ ಬಾನುಶ್ರೀ ಅವರಿಗೂ ಇದು ಕನ್ನಡದಲ್ಲಿ ಮೊದಲ ಸಿನಿಮಾ. ‘ಕನ್ನಡದಲ್ಲಿ ಮೊದಲ ಚಿತ್ರ. ಈಗ ಕನ್ನಡ ಕಲಿಯುತ್ತಿದ್ದೇನೆ’ ಎಂದು ಅವರು ಹೇಳಿದರೆ, ಇನ್ನೊಬ್ಬ ನಾಯಕಿ ಗಾಯತ್ರಿ ಗೌಡ ‘ಜಸ್ಟ್ ಮದ್ವೇಲಿ ಬಳಿಕ ಇದು ಎರಡನೇ ಚಿತ್ರ. ನಟನೆಗೆ ಒಳ್ಳೆಯ ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸವಿದೆ’ ಎಂದರು.

ರಾಜು ಶಿವಾಜಿ ಕ್ಯಾಮೆರಾ ಚಿತ್ರಕ್ಕಿದೆ. ಇದು ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ. ಇದಕ್ಕೂ ಮುನ್ನ ತಮಿಳಿನ ‘ಕತ್ತಿ’, ‘ರಾಜ ರಾಣಿ’ ಚಿತ್ರಗಳಿಗೆ ಸಹಾಯಕ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT