<p><strong>ನವದೆಹಲಿ (ಪಿಟಿಐ): </strong>ಷರಿಯತ್ ಕೋರ್ಟ್ಗಳು ಫತ್ವಾ ಹೊರಡಿಸುವುದಕ್ಕೆ ‘ಆಕ್ಷೇಪ’ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅದಕ್ಕೆ ಕಾನೂನಿನ ಸಮ್ಮತಿ ಹಾಗೂ ಸ್ಥಾನಮಾನ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ.</p>.<p>ಹಲವು ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮುಗ್ಧ ಜನರನ್ನು ದಂಡಿಸುವ ಆದೇಶ ನೀಡಿರುವಂಥ ಆ ನ್ಯಾಯಾಲಯಗಳಿಗೆ ಕಾನೂನುಬದ್ಧ ಸ್ಥಾನಮಾನ ಇಲ್ಲ ಎಂಬುದರಲ್ಲಿ ‘ಸಂದೇಹವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.</p>.<p>ಇಸ್ಲಾಂ ಸೇರಿದಂತೆ ಯಾವುದೇ ಧರ್ಮವು ಮುಗ್ಧರನ್ನು ಶಿಕ್ಷಿಸಲು ಆಸ್ಪದ ನೀಡುವುದಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಅವರ ನೇತೃತ್ವದ ಪೀಠ, ವ್ಯಕ್ತಿಯೊಬ್ಬನ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಹ ತೀರ್ಪುಗಳನ್ನು ಯಾವುದೇ ‘ದಾರುಲ್ ಖ್ವಾಜಾ’ ನೀಡಬಾರದು ಎಂದು ಆದೇಶಿಸಿತು.</p>.<p>ದೇಶದ ನ್ಯಾಯಾಂಗ ವ್ಯವಸ್ಥೆಗೆ ಸಮವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾದ ಷರಿಯತ್ ಕೋರ್ಟ್ಗಳ ಸಂವಿಧಾನಾತ್ಮಕ ಮಾನ್ಯತೆ ಪ್ರಶ್ನಿಸಿ ವಕೀಲರಾದ ವಿಶ್ವ ಲೋಚನ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.</p>.<p>ಫತ್ವಾ ಅನ್ನು ಜನತೆಯ ಮೇಲೆ ಹೇರುತ್ತಿರಲಿಲ್ಲ. ಅದು ಕೇವಲ ‘ಮುಫ್ತಿ’ ಅವರ ಒಂದು ಅಭಿಪ್ರಾಯವಷ್ಟೇ. ಅದನ್ನು ಜಾರಿಗೊಳಿಸುವ ಅಧಿಕಾರ ಅಥವಾ ಸಾಮರ್ಥ್ಯ ಅವರಿಗಿಲ್ಲ ಎಂದು ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ ಈ ಮೊದಲು ನ್ಯಾಯಾಲಯಕ್ಕೆ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಷರಿಯತ್ ಕೋರ್ಟ್ಗಳು ಫತ್ವಾ ಹೊರಡಿಸುವುದಕ್ಕೆ ‘ಆಕ್ಷೇಪ’ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅದಕ್ಕೆ ಕಾನೂನಿನ ಸಮ್ಮತಿ ಹಾಗೂ ಸ್ಥಾನಮಾನ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ.</p>.<p>ಹಲವು ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮುಗ್ಧ ಜನರನ್ನು ದಂಡಿಸುವ ಆದೇಶ ನೀಡಿರುವಂಥ ಆ ನ್ಯಾಯಾಲಯಗಳಿಗೆ ಕಾನೂನುಬದ್ಧ ಸ್ಥಾನಮಾನ ಇಲ್ಲ ಎಂಬುದರಲ್ಲಿ ‘ಸಂದೇಹವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.</p>.<p>ಇಸ್ಲಾಂ ಸೇರಿದಂತೆ ಯಾವುದೇ ಧರ್ಮವು ಮುಗ್ಧರನ್ನು ಶಿಕ್ಷಿಸಲು ಆಸ್ಪದ ನೀಡುವುದಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಅವರ ನೇತೃತ್ವದ ಪೀಠ, ವ್ಯಕ್ತಿಯೊಬ್ಬನ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಹ ತೀರ್ಪುಗಳನ್ನು ಯಾವುದೇ ‘ದಾರುಲ್ ಖ್ವಾಜಾ’ ನೀಡಬಾರದು ಎಂದು ಆದೇಶಿಸಿತು.</p>.<p>ದೇಶದ ನ್ಯಾಯಾಂಗ ವ್ಯವಸ್ಥೆಗೆ ಸಮವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾದ ಷರಿಯತ್ ಕೋರ್ಟ್ಗಳ ಸಂವಿಧಾನಾತ್ಮಕ ಮಾನ್ಯತೆ ಪ್ರಶ್ನಿಸಿ ವಕೀಲರಾದ ವಿಶ್ವ ಲೋಚನ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.</p>.<p>ಫತ್ವಾ ಅನ್ನು ಜನತೆಯ ಮೇಲೆ ಹೇರುತ್ತಿರಲಿಲ್ಲ. ಅದು ಕೇವಲ ‘ಮುಫ್ತಿ’ ಅವರ ಒಂದು ಅಭಿಪ್ರಾಯವಷ್ಟೇ. ಅದನ್ನು ಜಾರಿಗೊಳಿಸುವ ಅಧಿಕಾರ ಅಥವಾ ಸಾಮರ್ಥ್ಯ ಅವರಿಗಿಲ್ಲ ಎಂದು ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ ಈ ಮೊದಲು ನ್ಯಾಯಾಲಯಕ್ಕೆ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>