ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಷೇಕ್ಸ್‌ಪಿಯರ್‌ ಇಂದಿಗೂ ಜೀವಂತ’

Last Updated 20 ಜನವರಿ 2015, 5:53 IST
ಅಕ್ಷರ ಗಾತ್ರ

ಧಾರವಾಡ: ‘ಮಧ್ಯಯುಗದ ಇಂಗ್ಲೆಂಡ್ ದೇಶ­ವನ್ನು ಆಧುನಿಕ ವಿಚಾರಧಾರೆಗೆ ತಂದ ನಾಟಕಕಾರ ವಿಲಿಯಂ ಷೆೇಕ್ಸ್‌ಪಿಯರ್‌. ಅವನು ಇಂದಿಗೂ ಜಗತ್ತಿನ ಎಲ್ಲ ಭಾಷೆಗಳಲ್ಲಿ ಜೀವಂತವಾಗಿ ಉಳಿದಿ­ದ್ದಾನೆ’ ಎಂದು ಹಿರಿಯ ಚಿಂತಕ ಪ್ರೊ.ಜಿ.ಕೆ.­ಗೋವಿಂದ­ರಾವ್‌ ಹೇಳಿದರು.

ಇಲ್ಲಿನ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ನಾಟಕ-, ಸಿನಿಮಾಗಳಲ್ಲಿ ಷೆೇಕ್ಸ್‌ಪಿಯರ್‌ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಷೆೇಕ್ಸ್‌ಪಿಯರ್‌ನ ವಿನೋದ ಪ್ರವೃತ್ತಿ ಆತನ ಪ್ರಜ್ಞೆಯ ಭಾಗವೇ ಆಗಿತ್ತು. ನಗಿಸಿ, ನಗುತ್ತ ಜಗತ್ತಿನ ನಡೆ-ನುಡಿಗಳ ಹಿರಿಮೆ-, ಕಿರಿಮೆಗಳನ್ನು ನಮಗೆ ತೊರಿಸಬಲ್ಲ ನಾಟ್ಯ ಪ್ರಜ್ಞೆ ಅವನದು. ಅದರಿಂದ ದಾರ್ಶನಿಕ ಅನುಭವ ಪ್ರೇಕ್ಷಕರಿಗೆ ಆತ ಕೊಟ್ಟಿದ್ದಾನೆ. ಜ್ಯುಲಿಯಸ್ ಸೀಸರ್, ಮಾರ್ಕ್ ಆಂಟನಿ, ಮ್ಯಾಕ್‌ಬೆತ್‌ ಇವು ಷೆೇಕ್ಸ್‌ಪಿಯರ್‌ನ ಮಹಾ­ಪಾತ್ರಗಳು. ಜನ ಸಾಮಾನ್ಯರಿಗೆ ಬೇಕಾ­ದದ್ದು, ಈ ದೇಶವನ್ನು ಉತ್ತುಂಗಕ್ಕೆ ಕೊಂಡೊ­ಯ್ಯುವ ಮುತ್ಸದ್ದಿಗಳೇ ವಿನಹ, ದುರಂತಕ್ಕೆ ತಳ್ಳುವ, ಆತ್ಮಹತ್ಯಾ ಪ್ರವೃತ್ತಿಯ ರಾಜಕಾರಣಿಗಳಲ್ಲ ಎಂಬು­ದನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ ಶೇಕ್ಸ್‌ಪಿಯರ್‌ನ ರೀತಿ ಅಪೂರ್ವ, ಅನುಪಮ ಸಾಧನೆ’ ಎಂದರು.

ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಂವಾದ­ದಲ್ಲಿ ಪಾಲ್ಗೊಂಡಿದ್ದರು. ರಂಗಾಯಣ ಆಡಳಿತಾ­ಧಿಕಾರಿ ಕೆ.ಎಚ್.ಚನ್ನೂರ ಸ್ವಾಗತಿಸಿದರು. ನಿರ್ದೇ­ಶಕ ಪ್ರಕಾಶ ಗರುಡ ವಿಚಾರ ಸಂಕಿರಣ ನಡೆಸಿಕೊಟ್ಟರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ.ಶ್ಯಾಮಸುಂದರ ಬಿದರಕುಂದಿ, ಶ್ಯಾಮಲಾ ಗುರುಪ್ರಸಾದ, ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಷಯಾ ಜೇವೂರ, ವಿಜಯಾ ಗುತ್ತಲ, ಮಹಾ­ದೇವ ಹಡಪದ, ಶಶಿಧರ ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT