ನವದೆಹಲಿ (ಐಎಎನ್ಎಸ್): ಜಲಾಂತರ್ಗಾಮಿ ಐಎನ್ಎಸ್ ಸಿಂಧೂರತ್ನದಲ್ಲಿ ನಡೆದ ಅಪಘಾತ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾ ಮಂಡಳಿ ಏಳು ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಗುರುತಿಸಿದ್ದು, ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಾಜ್ಯಸಭೆಗೆ ತಿಳಿಸಿದರು.
ಆದರೆ ಐಎನ್ಎಸ್ ಸಿಂಧೂರಕ್ಷಕದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ತನಿಖಾ ಮಂಡಳಿಯ ವರದಿ ಪರಿಶೀಲನೆ ಇನ್ನೂ ಮುಗಿದಿಲ್ಲ ಎಂದು ಹೇಳಿದರು.
ಕಳೆದ ವರ್ಷದ ಆಗಸ್ಟ್ 14ರಂದು ಐಎನ್ಎಸ್ ಸಿಂಧೂರಕ್ಷಕದಲ್ಲಿ ನಡೆದ ಸ್ಫೋಟದಿಂದ ನೌಕೆ ಮುಳುಗಿ, 18 ಯೋಧರು ಮೃತಪಟ್ಟಿದ್ದರು ಮತ್ತು ಈ ವರ್ಷದ ಫೆ. 26ರಂದು ನಡೆದ ಐಎನ್ಎಸ್ ಸಿಂಧೂರತ್ನ ಅಪಘಾತದಲ್ಲಿ ನಾವಿಕರಿಬ್ಬರು ಅಸುನೀಗಿದ್ದರು. ಇವೆರೆಡು ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು.