ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹವಾಗುಣ ಬದಲಾವಣೆ ಕುರಿತ ರಾಜ್ಯ ಕ್ರಿಯಾ ಯೋಜನೆ’ ಕಾರ್ಯಕ್ರಮ

Last Updated 27 ಜನವರಿ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಹವಾಗುಣ ಬದಲಾವಣೆ ಕುರಿತ ರಾಜ್ಯ ಕ್ರಿಯಾ ಯೋಜನೆ’ ಬಗ್ಗೆ ರಾಜ್ಯದಾದ್ಯಂತ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ಸರಣಿಯನ್ನು ಆರಂಭಿಸಿದೆ.

ಮೊದಲ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವು ಬುಧವಾರ (ಜ. ೨೮) ಮೈಸೂರಿನ ‘ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌’ನಲ್ಲಿ ಬೆಳಿಗ್ಗೆ ೧೧ರಿಂದ ನಡೆಯಲಿದೆ. ಎರಡನೇ ಸಭೆಯು ಜ.೨೯ರಂದು ಬೆಳಿಗ್ಗೆ ೧೧ ಗಂಟೆಯಿಂದ ಕೊಡಗಿನ ಹೋಟೆಲ್‌ ಕೂರ್ಗ್‌ ಇಂಟರ್‌ನ್ಯಾಶನಲ್‌ನಲ್ಲಿ ನಡೆಯಲಿದೆ.

‘ಈ ಸರಣಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಪರಿಸರಕ್ಕಾಗಿ ಕೆಲಸ ಮಾಡುವ ಸಂಘಗಳು ಭಾಗವ­ಹಿಸಲಿವೆ’ ಎಂದು ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT