ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಹವಾಗುಣ ಬದಲಾವಣೆ ಕುರಿತ ರಾಜ್ಯ ಕ್ರಿಯಾ ಯೋಜನೆ’ ಬಗ್ಗೆ ರಾಜ್ಯದಾದ್ಯಂತ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮ ಸರಣಿಯನ್ನು ಆರಂಭಿಸಿದೆ.
ಮೊದಲ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವು ಬುಧವಾರ (ಜ. ೨೮) ಮೈಸೂರಿನ ‘ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್’ನಲ್ಲಿ ಬೆಳಿಗ್ಗೆ ೧೧ರಿಂದ ನಡೆಯಲಿದೆ. ಎರಡನೇ ಸಭೆಯು ಜ.೨೯ರಂದು ಬೆಳಿಗ್ಗೆ ೧೧ ಗಂಟೆಯಿಂದ ಕೊಡಗಿನ ಹೋಟೆಲ್ ಕೂರ್ಗ್ ಇಂಟರ್ನ್ಯಾಶನಲ್ನಲ್ಲಿ ನಡೆಯಲಿದೆ.
‘ಈ ಸರಣಿ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಪರಿಸರಕ್ಕಾಗಿ ಕೆಲಸ ಮಾಡುವ ಸಂಘಗಳು ಭಾಗವಹಿಸಲಿವೆ’ ಎಂದು ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.