<p><strong>ಶ್ರೀನಗರ(ಪಿಟಿಐ): </strong>ರಾಷ್ಟ್ರದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಸಂಚು ರೂಪಿಸಿ ಕಾರ್ಯಪ್ರವೃತ್ತರಾಗಿದ್ದ 10 ಉಗ್ರರನ್ನು ಹತ್ಯೆಗೈಯುವ ಮೂಲಕ ಶೌರ್ಯ ಮೆರೆದ ವಿಶೇಷ ದಳದ ಕಮಾಂಡೊ ಲ್ಯಾನ್ಸ್ ನಾಯಕ್ ಮೋಹನ್ನಾಥ್ ಗೋಸ್ವಾಮಿ ಉಗ್ರರ ವಿರುದ್ಧ ಹೋರಾಡುತ್ತಲೇ ಗುರುವಾರ ಅಮರರಾಗಿದ್ದಾರೆ.</p>.<p>ಗೋಸ್ವಾಮಿ ಅವರು ಕಾಶ್ಮೀರ ಕಣಿವೆಯಲ್ಲಿ ಕಳೆದ 11 ದಿನಗಳಲ್ಲಿ ಮೂರು ಬಾರಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಮೂರು ಕಾರ್ಯಾಚರಣೆಗಳು ಸೇರಿ ಅವರು ಒಟ್ಟು 10 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದರು. ಗುರುವಾರ ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈದ ಅವರು, ಹೋರಾಡುತ್ತಲೇ ವೀರ ಮರಣ ಅಪ್ಪಿದ್ದರು.<br /> <br /> ಗೋಸ್ವಾಮಿ ಅವರು 2002ರಲ್ಲಿ ಸ್ವಯಂ ಸ್ಫೂರ್ತಿಯಿಂದ ಸೇನೆಗೆ ಸೇರಿದ್ದರು. ವಿಶೇಷ ಕಮಾಂಡೊ ಪಡೆಯಲ್ಲಿ ಸಾಮರ್ಥ್ಯ ತೋರಿ, ಬಹುಬೇಗನೆ ಅತ್ಯುತ್ತಮ ಕಮಾಂಡೊ ಎಂದು ಮೆಚ್ಚುಗೆ ಪಡೆದಿದ್ದರು.<br /> <br /> ಗೋಸ್ವಾಮಿ ಅವರು ನೈನಿತಾಲ್ ಜಿಲ್ಲೆಯ ಹಲ್ಡ್ವಾನಿಯ ಇಂದಿರಾ ನಗರ ಗ್ರಾಮದ ನಿವಾಸಿ. ಇವರಿಗೆ ಪತ್ನಿ ಹಾಗೂ ಏಳು ವರ್ಷದ ಪುತ್ರಿ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ(ಪಿಟಿಐ): </strong>ರಾಷ್ಟ್ರದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಸಂಚು ರೂಪಿಸಿ ಕಾರ್ಯಪ್ರವೃತ್ತರಾಗಿದ್ದ 10 ಉಗ್ರರನ್ನು ಹತ್ಯೆಗೈಯುವ ಮೂಲಕ ಶೌರ್ಯ ಮೆರೆದ ವಿಶೇಷ ದಳದ ಕಮಾಂಡೊ ಲ್ಯಾನ್ಸ್ ನಾಯಕ್ ಮೋಹನ್ನಾಥ್ ಗೋಸ್ವಾಮಿ ಉಗ್ರರ ವಿರುದ್ಧ ಹೋರಾಡುತ್ತಲೇ ಗುರುವಾರ ಅಮರರಾಗಿದ್ದಾರೆ.</p>.<p>ಗೋಸ್ವಾಮಿ ಅವರು ಕಾಶ್ಮೀರ ಕಣಿವೆಯಲ್ಲಿ ಕಳೆದ 11 ದಿನಗಳಲ್ಲಿ ಮೂರು ಬಾರಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಮೂರು ಕಾರ್ಯಾಚರಣೆಗಳು ಸೇರಿ ಅವರು ಒಟ್ಟು 10 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದರು. ಗುರುವಾರ ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈದ ಅವರು, ಹೋರಾಡುತ್ತಲೇ ವೀರ ಮರಣ ಅಪ್ಪಿದ್ದರು.<br /> <br /> ಗೋಸ್ವಾಮಿ ಅವರು 2002ರಲ್ಲಿ ಸ್ವಯಂ ಸ್ಫೂರ್ತಿಯಿಂದ ಸೇನೆಗೆ ಸೇರಿದ್ದರು. ವಿಶೇಷ ಕಮಾಂಡೊ ಪಡೆಯಲ್ಲಿ ಸಾಮರ್ಥ್ಯ ತೋರಿ, ಬಹುಬೇಗನೆ ಅತ್ಯುತ್ತಮ ಕಮಾಂಡೊ ಎಂದು ಮೆಚ್ಚುಗೆ ಪಡೆದಿದ್ದರು.<br /> <br /> ಗೋಸ್ವಾಮಿ ಅವರು ನೈನಿತಾಲ್ ಜಿಲ್ಲೆಯ ಹಲ್ಡ್ವಾನಿಯ ಇಂದಿರಾ ನಗರ ಗ್ರಾಮದ ನಿವಾಸಿ. ಇವರಿಗೆ ಪತ್ನಿ ಹಾಗೂ ಏಳು ವರ್ಷದ ಪುತ್ರಿ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>