<p><strong>ಬೆಂಗಳೂರು</strong>: ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ, ಆದರೆ ಹೆಮ್ಮೆಪಡಬಹುದಾದ ಕಾರಣಕ್ಕಲ್ಲ! ಅಧ್ಯಕ್ಷರಿಲ್ಲದೆ ಎರಡು ವರ್ಷ, ಎರಡು ತಿಂಗಳು ಪೂರೈಸಿದ್ದಕ್ಕಾಗಿ.<br /> <br /> 1961ರಲ್ಲಿ ಈಗಿನ ಹೆಸರು ಮತ್ತು ಸ್ವರೂಪ ಪಡೆದುಕೊಂಡ ಸಾಹಿತ್ಯ ಅಕಾಡೆಮಿ, ಸತತ ಎರಡು ವರ್ಷಗಳ ಕಾಲ ಅಧ್ಯಕ್ಷರೇ ಇಲ್ಲದ ಪರಿಸ್ಥಿತಿ ಯಾವತ್ತೂ ಎದುರಿಸಿರಲಿಲ್ಲ.<br /> <br /> 1961ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಂಸ್ಕೃತಿ ಪ್ರಸಾರ ಇಲಾಖೆ’ ಎಂಬ ಹೆಸರು ಹೊಂದಿತ್ತು. 1961ರಲ್ಲಿ ಅದು ಈಗಿನ ಹೆಸರು ಪಡೆದುಕೊಂಡಿತು. ಹಿಂದೆ ಗೀತಾ ನಾಗಭೂಷಣ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಕಾಡೆಮಿಗೆ ಒಂದು ವರ್ಷ ಅಧ್ಯಕ್ಷರ ನೇಮಕ ಆಗಿರಲಿಲ್ಲ.<br /> ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರ ಅಧಿಕಾರಾವಧಿ 2011ರ ನವೆಂಬರ್ 26ರಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇತ್ತು. ಆ ಸರ್ಕಾರದ ಅವಧಿ ಮುಗಿಯುವ ವರೆಗೂ ಹೊಸ ಅಧ್ಯಕ್ಷರ ನೇಮಕ ಆಗಲಿಲ್ಲ.<br /> <br /> ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂತು, ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ‘ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಾಗುವುದು’ ಎಂದು ಸಚಿವರು ಹಲವು ಬಾರಿ ಹೇಳಿದ್ದಾರೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.<br /> <br /> <strong>‘ನಿಧಾನದ್ರೋಹ’:</strong> ‘ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ನಿಧಾನದ್ರೋಹ ಎನ್ನಬೇಕು. ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ಸ್ಥಾನವನ್ನು ಯಾವತ್ತೂ ಖಾಲಿ ಬಿಡಬಾರದು. ಹೊಸಬರು ನೇಮಕ ಆಗುವವರೆಗೂ ಹಳಬರನ್ನೇ ಮುಂದುವರಿಸುವ ಪದ್ಧತಿ ಜಾರಿಗೆ ಬರಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ<strong> ‘ಪ್ರಜಾವಾಣಿ’ಗೆ </strong>ಪ್ರತಿಕ್ರಿಯೆ ನೀಡಿದರು.<br /> <br /> ಇದೊಂದೇ ಅಲ್ಲ, ಬೇರೆ ಅಕಾಡೆಮಿಗಳ ಅಧ್ಯಕ್ಷ, ಸದಸ್ಯರಿಂದ ರಾಜೀನಾಮೆ ಪಡೆದಷ್ಟೇ ವೇಗವಾಗಿ ಹೊಸಬರ ನೇಮಕ ಆಗಬೇಕಿತ್ತು ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು. ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರ ಸ್ಥಾನಕ್ಕೆ ಸೂಚಿಸಿರುವ ಹೆಸರುಗಳಿಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆತಿದೆ. ಆದರೆ ಸದಸ್ಯರ ನೇಮಕವನ್ನೂ ಇದರ ಜೊತೆಗೇ ಮಾಡಬೇಕು ಎಂಬ ಆಲೋಚನೆ ಇರುವುದರಿಂದ ವಿಳಂಬ ಆಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.<br /> <br /> <strong>ಖರ್ಚಾಗದೆ ಉಳಿದ ₨ 1 ಕೋಟಿ</strong></p>.<p>ಅಕಾಡೆಮಿಯ ಚಿನ್ನದ ಹಬ್ಬ ಆಚರಣೆಗೆ ಅಂದಾಜು ₨ 30 ಲಕ್ಷ ಬೇಕು ಎಂದು ಪ್ರೊ. ಕೃಷ್ಣಯ್ಯ ಅವರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುಂದೆ ಕೆಲವೇ ದಿನಗಳಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತು. ಚಿನ್ನದ ಹಬ್ಬಕ್ಕೆ ಸಂಬಂಧಿಸಿದ ಯೋಜನೆಗಳು ಅನುಷ್ಠಾನಕ್ಕೆ ಬರಲಿಲ್ಲ.<br /> <br /> ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಕಾಡೆಮಿಗೆ ದೊರೆತ ₨ 80 ಲಕ್ಷ ಅನುದಾನ ಸೇರಿದಂತೆ ಒಟ್ಟು ₨ 1 ಕೋಟಿ ಖರ್ಚಾಗದೆ ಉಳಿದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಅಕಾಡೆಮಿಯ ಮೂಲಕ ಜಾರಿಗೊಳಿಸಲು ಯೋಜಿಸಿದ್ದ ‘ಪ್ರಾಚೀನ ಕಾವ್ಯದ ಓದು’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂದೆ ಬಂದಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ, ಆದರೆ ಹೆಮ್ಮೆಪಡಬಹುದಾದ ಕಾರಣಕ್ಕಲ್ಲ! ಅಧ್ಯಕ್ಷರಿಲ್ಲದೆ ಎರಡು ವರ್ಷ, ಎರಡು ತಿಂಗಳು ಪೂರೈಸಿದ್ದಕ್ಕಾಗಿ.<br /> <br /> 1961ರಲ್ಲಿ ಈಗಿನ ಹೆಸರು ಮತ್ತು ಸ್ವರೂಪ ಪಡೆದುಕೊಂಡ ಸಾಹಿತ್ಯ ಅಕಾಡೆಮಿ, ಸತತ ಎರಡು ವರ್ಷಗಳ ಕಾಲ ಅಧ್ಯಕ್ಷರೇ ಇಲ್ಲದ ಪರಿಸ್ಥಿತಿ ಯಾವತ್ತೂ ಎದುರಿಸಿರಲಿಲ್ಲ.<br /> <br /> 1961ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಂಸ್ಕೃತಿ ಪ್ರಸಾರ ಇಲಾಖೆ’ ಎಂಬ ಹೆಸರು ಹೊಂದಿತ್ತು. 1961ರಲ್ಲಿ ಅದು ಈಗಿನ ಹೆಸರು ಪಡೆದುಕೊಂಡಿತು. ಹಿಂದೆ ಗೀತಾ ನಾಗಭೂಷಣ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಕಾಡೆಮಿಗೆ ಒಂದು ವರ್ಷ ಅಧ್ಯಕ್ಷರ ನೇಮಕ ಆಗಿರಲಿಲ್ಲ.<br /> ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಎಂ.ಎಚ್. ಕೃಷ್ಣಯ್ಯ ಅವರ ಅಧಿಕಾರಾವಧಿ 2011ರ ನವೆಂಬರ್ 26ರಂದು ಕೊನೆಗೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇತ್ತು. ಆ ಸರ್ಕಾರದ ಅವಧಿ ಮುಗಿಯುವ ವರೆಗೂ ಹೊಸ ಅಧ್ಯಕ್ಷರ ನೇಮಕ ಆಗಲಿಲ್ಲ.<br /> <br /> ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂತು, ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ‘ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಾಗುವುದು’ ಎಂದು ಸಚಿವರು ಹಲವು ಬಾರಿ ಹೇಳಿದ್ದಾರೆ. ಆದರೆ ಕಾರ್ಯರೂಪಕ್ಕೆ ಬಂದಿಲ್ಲ.<br /> <br /> <strong>‘ನಿಧಾನದ್ರೋಹ’:</strong> ‘ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ನಿಧಾನದ್ರೋಹ ಎನ್ನಬೇಕು. ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ಸ್ಥಾನವನ್ನು ಯಾವತ್ತೂ ಖಾಲಿ ಬಿಡಬಾರದು. ಹೊಸಬರು ನೇಮಕ ಆಗುವವರೆಗೂ ಹಳಬರನ್ನೇ ಮುಂದುವರಿಸುವ ಪದ್ಧತಿ ಜಾರಿಗೆ ಬರಬೇಕು’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ<strong> ‘ಪ್ರಜಾವಾಣಿ’ಗೆ </strong>ಪ್ರತಿಕ್ರಿಯೆ ನೀಡಿದರು.<br /> <br /> ಇದೊಂದೇ ಅಲ್ಲ, ಬೇರೆ ಅಕಾಡೆಮಿಗಳ ಅಧ್ಯಕ್ಷ, ಸದಸ್ಯರಿಂದ ರಾಜೀನಾಮೆ ಪಡೆದಷ್ಟೇ ವೇಗವಾಗಿ ಹೊಸಬರ ನೇಮಕ ಆಗಬೇಕಿತ್ತು ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು. ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ ಅಧ್ಯಕ್ಷರ ಸ್ಥಾನಕ್ಕೆ ಸೂಚಿಸಿರುವ ಹೆಸರುಗಳಿಗೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ದೊರೆತಿದೆ. ಆದರೆ ಸದಸ್ಯರ ನೇಮಕವನ್ನೂ ಇದರ ಜೊತೆಗೇ ಮಾಡಬೇಕು ಎಂಬ ಆಲೋಚನೆ ಇರುವುದರಿಂದ ವಿಳಂಬ ಆಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.<br /> <br /> <strong>ಖರ್ಚಾಗದೆ ಉಳಿದ ₨ 1 ಕೋಟಿ</strong></p>.<p>ಅಕಾಡೆಮಿಯ ಚಿನ್ನದ ಹಬ್ಬ ಆಚರಣೆಗೆ ಅಂದಾಜು ₨ 30 ಲಕ್ಷ ಬೇಕು ಎಂದು ಪ್ರೊ. ಕೃಷ್ಣಯ್ಯ ಅವರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುಂದೆ ಕೆಲವೇ ದಿನಗಳಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತು. ಚಿನ್ನದ ಹಬ್ಬಕ್ಕೆ ಸಂಬಂಧಿಸಿದ ಯೋಜನೆಗಳು ಅನುಷ್ಠಾನಕ್ಕೆ ಬರಲಿಲ್ಲ.<br /> <br /> ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಕಾಡೆಮಿಗೆ ದೊರೆತ ₨ 80 ಲಕ್ಷ ಅನುದಾನ ಸೇರಿದಂತೆ ಒಟ್ಟು ₨ 1 ಕೋಟಿ ಖರ್ಚಾಗದೆ ಉಳಿದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಅಕಾಡೆಮಿಯ ಮೂಲಕ ಜಾರಿಗೊಳಿಸಲು ಯೋಜಿಸಿದ್ದ ‘ಪ್ರಾಚೀನ ಕಾವ್ಯದ ಓದು’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಂದೆ ಬಂದಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>