ಉನ್ನಾವೊ(ಉತ್ತರ ಪ್ರದೇಶ) (ಪಿಟಿಐ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿಯೇ ತೀರುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ 2019ರ ಒಳಗೆ ವೈಭವೋಪೇತವಾಗಿ ರಾಮ ಮಂದಿರವನ್ನು ಕಟ್ಟಲಾಗುತ್ತದೆ ಎಂದು ಸಂಸದ ಸಾಕ್ಷಿ ಮಹಾರಾಜ್ ಹೇಳುವ ಮೂಲ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
‘ಅಯೋಧ್ಯೆಯಲ್ಲಿ ರಾಮ ಮಂದಿರವಿತ್ತು. ಭವಿಷ್ಯದಲ್ಲೂ ಮಂದಿರ ಇರಲಿದೆ’ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.
‘ರಾಮಮಂದಿರ ನಿರ್ಮಾಣವಾಗು ವುದು ಬಿಜೆಪಿಯವರಿಗೆ ಬೇಕಿಲ್ಲ. ಅದು ನಮ್ಮಂತಹ ಸಾಧು ಸಂತರಿಗೆ ಬೇಕಿದೆ.
ರಾಮಮಂದಿರ ನಿರ್ಮಾಣ ಅಭಿಯಾನಕ್ಕೆ ಬೆಂಬಲ ನೀಡುವಂತೆ ನಾವು ಎಲ್ಲ ರಾಜಕೀಯ ಪಕ್ಷಗಳನ್ನು ವಿನಂತಿ ಮಾಡಿಕೊಂಡಿದ್ದೇವೆ. ಆದರೆ ಕೇವಲ ಬಿಜೆಪಿ ಬೆಂಬಲಿಸಿತು’ ಎಂದು ಉನ್ನಾವೊ ಸಂಸದರೂ ಆಗಿರುವ ಸಾಕ್ಷಿ ಮಹಾರಾಜ್ ಅವರು ಹೇಳಿದರು.