<p><strong>ಬೆಂಗಳೂರು: </strong>ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರಿನ ಕೆಆರ್ಎಸ್ ಸೇರಿದಂತೆ ರಾಜ್ಯದ 27 ಸ್ಥಳಗಳಿಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.<br /> <br /> ಬಿಜೆಪಿಯ ವಿ.ಸುನಿಲ್ಕುಮಾರ್ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.<br /> <br /> ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಂತರಿಕ ಭದ್ರತಾ ವಿಭಾಗ ತೆರೆಯಲಾಗಿದೆ. ‘ಸೆಂಟರ್ ಫಾರ್ ಕೌಂಟರ್ ಟೆರರಿಸಂ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.<br /> <br /> ಸೂಕ್ಷ್ಮ ಸ್ಥಾವರಗಳು, ಮುಖ್ಯಸ್ಥಳ ಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದಲ್ಲಿ ರಾಜ್ಯ ಕೈಗಾರಿಕಾ ಪಡೆಯನ್ನು ಸೃಜಿಸಲಾಗಿದ್ದು, ಈ ಪಡೆಯನ್ನು ರಾಜ್ಯದ ಪ್ರಮುಖ ಘಟಕಗಳ ಭದ್ರತೆಗಾಗಿ ನಿಯೋಜಿಸಲಾಗುತ್ತದೆ ಎಂದು ವಿವರಿಸಿದ್ದಾರೆ.<br /> <br /> <strong>ಎಲ್ಲೆಲ್ಲಿ ಬೆದರಿಕೆ?</strong><br /> <strong>ಬೆಂಗಳೂರು: </strong>ಇನ್ಫೋಸಿಸ್, ವಿಪ್ರೊ, ಫೋರಂ ಮಾಲ್, ಗರುಡಾ ಮಾಲ್, ಸೆಂಟ್ರಲ್ ಮಾಲ್, ಭಾರತೀಯ ವಿಜ್ಞಾನ ಸಂಸ್ಥೆ, ನಗರ ಮತ್ತು ಯಶವಂತಪುರ ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ತಾಜ್ ಸಮೂಹದ ಹೋಟೆಲ್ಗಳು, ಕಲಾಸಿಪಾಳ್ಯ ಬಸ್ ನಿಲ್ದಾಣ, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಗಳು.<br /> <strong>ಮೈಸೂರು:</strong> ಇನ್ಫೋಸಿಸ್, ವಿಪ್ರೊ, ಮೈಸೂರು ಅರಮನೆ.<br /> <strong>ಮಂಡ್ಯ: </strong>ಕೆಆರ್ಎಸ್, ಶ್ರೀರಂಗಪಟ್ಟಣ (ಟಿಪ್ಪು ಅರಮನೆ).<br /> <strong>ಮಂಗಳೂರು: </strong>ಇನ್ಫೋಸಿಸ್, ವಿಪ್ರೊ, ಮಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ.<br /> <strong>ಉಡುಪಿ: </strong>ಶ್ರೀಕೃಷ್ಣದೇವಾಲಯ.<br /> <strong>ವಿಜಾಪುರ: </strong>ಆಲಮಟ್ಟಿ ಜಲಾಶಯ.<br /> <strong>ಕಾರವಾರ: </strong>ಕೈಗಾ ಅಣುಸ್ಥಾವರ .<br /> <strong>ಬಳ್ಳಾರಿ: </strong>ತುಂಗಭದ್ರಾ ವಿದ್ಯುತ್ ಸ್ಥಾವರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೈಸೂರಿನ ಕೆಆರ್ಎಸ್ ಸೇರಿದಂತೆ ರಾಜ್ಯದ 27 ಸ್ಥಳಗಳಿಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.<br /> <br /> ಬಿಜೆಪಿಯ ವಿ.ಸುನಿಲ್ಕುಮಾರ್ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.<br /> <br /> ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಂತರಿಕ ಭದ್ರತಾ ವಿಭಾಗ ತೆರೆಯಲಾಗಿದೆ. ‘ಸೆಂಟರ್ ಫಾರ್ ಕೌಂಟರ್ ಟೆರರಿಸಂ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.<br /> <br /> ಸೂಕ್ಷ್ಮ ಸ್ಥಾವರಗಳು, ಮುಖ್ಯಸ್ಥಳ ಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಆಂತರಿಕ ಭದ್ರತಾ ವಿಭಾಗದಲ್ಲಿ ರಾಜ್ಯ ಕೈಗಾರಿಕಾ ಪಡೆಯನ್ನು ಸೃಜಿಸಲಾಗಿದ್ದು, ಈ ಪಡೆಯನ್ನು ರಾಜ್ಯದ ಪ್ರಮುಖ ಘಟಕಗಳ ಭದ್ರತೆಗಾಗಿ ನಿಯೋಜಿಸಲಾಗುತ್ತದೆ ಎಂದು ವಿವರಿಸಿದ್ದಾರೆ.<br /> <br /> <strong>ಎಲ್ಲೆಲ್ಲಿ ಬೆದರಿಕೆ?</strong><br /> <strong>ಬೆಂಗಳೂರು: </strong>ಇನ್ಫೋಸಿಸ್, ವಿಪ್ರೊ, ಫೋರಂ ಮಾಲ್, ಗರುಡಾ ಮಾಲ್, ಸೆಂಟ್ರಲ್ ಮಾಲ್, ಭಾರತೀಯ ವಿಜ್ಞಾನ ಸಂಸ್ಥೆ, ನಗರ ಮತ್ತು ಯಶವಂತಪುರ ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ತಾಜ್ ಸಮೂಹದ ಹೋಟೆಲ್ಗಳು, ಕಲಾಸಿಪಾಳ್ಯ ಬಸ್ ನಿಲ್ದಾಣ, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಗಳು.<br /> <strong>ಮೈಸೂರು:</strong> ಇನ್ಫೋಸಿಸ್, ವಿಪ್ರೊ, ಮೈಸೂರು ಅರಮನೆ.<br /> <strong>ಮಂಡ್ಯ: </strong>ಕೆಆರ್ಎಸ್, ಶ್ರೀರಂಗಪಟ್ಟಣ (ಟಿಪ್ಪು ಅರಮನೆ).<br /> <strong>ಮಂಗಳೂರು: </strong>ಇನ್ಫೋಸಿಸ್, ವಿಪ್ರೊ, ಮಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ.<br /> <strong>ಉಡುಪಿ: </strong>ಶ್ರೀಕೃಷ್ಣದೇವಾಲಯ.<br /> <strong>ವಿಜಾಪುರ: </strong>ಆಲಮಟ್ಟಿ ಜಲಾಶಯ.<br /> <strong>ಕಾರವಾರ: </strong>ಕೈಗಾ ಅಣುಸ್ಥಾವರ .<br /> <strong>ಬಳ್ಳಾರಿ: </strong>ತುಂಗಭದ್ರಾ ವಿದ್ಯುತ್ ಸ್ಥಾವರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>