ಹಿನ್ನೆಲೆ: ಅದು 1973 ನವೆಂಬರ್ 27. ಅರುಣಾ ಅವರು ಕೆಇಎಂ ಆಸ್ಪತ್ರೆಯಲ್ಲಿ ತಮ್ಮ ಕಿರಿಯ ನರ್ಸ್ ಜತೆಗೂಡಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಸೋಹನ್ಲಾಲ್ ವಾಲ್ಮಿಕಿ ಎಂಬ ವಾರ್ಡ್ಬಾಯ್ ಅರುಣಾ ಅವರ ಮೇಲೆ ಅತ್ಯಾಚಾರ ನಡೆಸಿದ್ದ. ಕೃತ್ಯದ ವೇಳೆ ನಾಯಿಯನ್ನು ಕಟ್ಟಿಹಾಕುವ ಸರಪಳಿಯಿಂದ ಕಟ್ಟಿಹಾಕಿದ್ದ.ಇದರಿಂದ ಅರುಣಾ ಅವರ ಮೆದುಳಿಗೆ ಆಮ್ಲಜನಕ ಪೂರಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅಂದಿನಿಂದ ಅರುಣಾ ಅವರು ಕೋಮಾ ಸ್ಥಿತಿಯಲ್ಲಿದ್ದರು.
ದಯಮರಣ ಕೋರಿದ್ದರು: ದಶಕಗಳಿಂದ ಕೋಮಾದಲ್ಲಿರುವ ಅರುಣಾ ಅವರಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ 2011ರ ಜನವರಿ 24ರಂದು ಅವರ ಗೆಳತಿ, ಪತ್ರಕರ್ತೆ ಪಿಂಕಿ ವಿರಾನಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.