ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನಕಾರಿ ಬರಹ: ಬಂಧನ

ಫೇಸ್‌ಬುಕ್‌ನಲ್ಲಿ ದಿವಾಕರ ಶಾಸ್ತ್ರಿ ದಂಪತಿ ಪುತ್ರಿ ಬಗ್ಗೆ ಉಲ್ಲೇಖ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಮ­ಚಂದ್ರಾ­ಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿರುವ  ದಿವಾಕರ ಶಾಸ್ತ್ರಿ ದಂಪತಿಯ ಮಗಳು ಅಂಶುಮತಿ ಅವರ ಬಗ್ಗೆ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿ ಅವಹೇಳ­ನ­­ಕಾರಿಯಾಗಿ ಬರೆದ ಆರೋಪದ ಮೇಲೆ ಇಬ್ಬರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಹುಣಸೂರಿನ ಸನತ್‌ ಪಾಲೆಪ್ಪಾಡಿ (45) ಮತ್ತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಎಚ್‌.ಕೆ.ಸಂತೋಷ್‌ (30) ಬಂಧಿತರು. ‘ಸನತ್‌ ಮತ್ತು ಸಂತೋಷ್‌ ಅವರು ನನ್ನ ಬಗ್ಗೆ ಫೇಸ್‌ಬುಕ್‌­ನಲ್ಲಿ ಅವಹೇಳನ­ಕಾರಿಯಾಗಿ ಬರೆದಿದ್ದಾರೆ. ಅಲ್ಲದೇ, ನನ್ನ ಖಾಸಗಿ ಬದುಕಿಗೆ ಸಂಬಂಧಿಸಿದ ಛಾಯಾ­ಚಿತ್ರಗಳನ್ನು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಅಂಶುಮತಿ ಅವರು ಅ.19ರಂದು ಪೊಲೀಸರಿಗೆ ದೂರು ನೀಡಿದ್ದರು.

ಆ ದೂರು ಆಧರಿಸಿ ಸನತ್‌ ಹಾಗೂ ಸಂತೋಷ್‌ನನ್ನು ಶನಿವಾರ ಬಂಧಿಸಿ ನ್ಯಾಯಾಧೀಶರ ಮನೆಗೆ ಹಾಜರು­ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿ  ಆದೇಶ  ಹೊರಡಿಸಿದ್ದು,  ಅವರಿಬ್ಬರನ್ನೂ  ಪರಪ್ಪನ  ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ  ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಸುಳ್ಯದ ಸನತ್‌ ಬಿ.ಎಸ್ಸಿ ಓದಿದ್ದು, ಹುಣಸೂರಿನಲ್ಲಿ ಕೃಷಿ ಮಾಡುತ್ತಿದ್ದ. ಬಿ.ಕಾಂ ಪದವೀಧರನಾದ ಸಂತೋಷ್‌ ನಗರದ ಖಾಸಗಿ ಕಂಪೆನಿ­ಯೊಂದರಲ್ಲಿ ಉದ್ಯೋಗಿ­ಯಾಗಿದ್ದ. ಆತ ಗಿರಿನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರ ವಿರುದ್ಧ ಮಹಿಳೆಯ ಖಾಸಗಿ ಬದುಕಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿ ಗೌರವಕ್ಕೆ ಧಕ್ಕೆ ತಂದ ಮತ್ತು ಮಾಹಿತಿ ತಂತ್ರಜ್ಞಾನ ದುರುಪಯೋಗ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT