ಬದರೀನಾಥಕ್ಕೆ ಹೋಗಿದ್ದ ಮೈಸೂರಿನ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್ 18ರಂದು ಮೈಸೂರಿನ 42 ಮಂದಿ ಬೆಂಗಳೂರಿನಿಂದ ಯಾತ್ರೆಗೆ ಹೋಗಿದ್ದರು.
ಪ್ರವಾಹ ಹಾಗೂ ಭೂಕುಸಿತದಿಂದ ಹಲವು ಕನ್ನಡಿಗರು ಹಿಂದಿರುಗಿ ರಾಜ್ಯಕ್ಕೆ ಮರಳಲಾಗದ ಸ್ಥಿತಿಯಲ್ಲಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರ ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚಿಸಿದೆ.