ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ಕೋರ್ಟ್‌ ತಡೆಯಾಜ್ಞೆ

Last Updated 26 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಕಲೇಶಪುರ: ಎತ್ತಿನ ಹೊಳೆ ತಿರುವು ಯೋಜನಾ ಕಾಮಗಾರಿಗೆ ಇಲ್ಲಿಯ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ ನ್ಯಾಯಾಲಯ ಶುಕ್ರವಾರ ತಡೆಯಾಜ್ಞೆ ನೀಡಿದೆ. ಯೋಜನೆಯ ಸಂತ್ರಸ್ತರ ಪಟ್ಟಿಯಲ್ಲಿ­ರುವ ತಾಲ್ಲೂಕಿನ ಗುಡಾಣಕೆರೆ ಗ್ರಾಮದ ಜಿ.ಎ. ಚಂದ್ರು ಎಂಬುವವರು ನ್ಯಾಯಾಲಯದಲ್ಲಿ ಯೋಜನೆಯ ಅನಧಿಕೃತ ಕಾಮಗಾರಿ­ಗಳಿಗೆ ತಡೆಯಾಜ್ಞೆ ನೀಡುವಂತೆ ಕೋರಿ ದಾವೆ ಹೂಡಿದ್ದರು.

ಸ್ವಾಧೀನ, ಶಾಂತಿಯುತ ಅನುಭೋಗಕ್ಕೆ ಧಕ್ಕೆ ಆಗುತ್ತಿರು­ವುದ­ರಿಂದ ಕಾಮ­ಗಾರಿ ನಿಲ್ಲಿಸುವಂತೆ ನ್ಯಾಯಾಲಯ ಯೋಜನೆಯ ಗುತ್ತಿಗೆ ಪಡೆದಿರುವ ಹೈದರಾ­ಬಾದ್‌ನ ಮೇಘಾ ಎಂಜಿನಿಯ­ರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ನ ಮುಖ್ಯ ವ್ಯವಸ್ಥಾ­ಪಕ ಸಂಜಯ್‌ ಗುರುಕರ್‌ ಅವರಿಗೆ ಕಾಮಗಾರಿಗೆ ಸಂಬಂಧಿಸಿ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT