ಅಂಬೇಡ್ಕರ್–ಪೆರಿಯಾರ್ ಸ್ಟಡಿ ಸರ್ಕಲ್ (ಎಪಿಎಸ್ಸಿ) ಮೇಲೆ ನಿಷೇಧ ಹೇರಿರುವ ಐಐಟಿಯ ಈ ಕ್ರಮವನ್ನು ವಿರೋಧಿಸಿರುವ ಡಿವೈಎಫ್ಐ ಮೋದಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಇಂದು ಐಐಟಿ ಕ್ಯಾಂಪಸ್ ಮುಂದೆ ಜಮಾಯಿಸಿದ್ದ ಡಿವೈಎಫ್ಐ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಐಐಟಿಯ ಆಡಳಿತಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನಚಕಮಕಿ ನಡೆಯಿತು. ಪೊಲೀಸರು ವಿದ್ಯಾರ್ಥಿ ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಈ ಪ್ರತಿಭಟನೆಗೆ ಡಿಎಂಕೆ ಮತ್ತು ಎಂಡಿಎಂಕೆ ಪಕ್ಷಗಳು ಬೆಂಬಲ ಸೂಚಿಸಿದ್ದವು.