<p>ಬೆಂಗಳೂರು: ‘ಸಂಸ್ಕೃತದಲ್ಲಿ ಶಾಸ್ತ್ರಗ್ರಂಥಗಳು ಸಾವಿರಾರು ಇವೆ. ನಾಡಿನಲ್ಲಿರುವ ಸಂಸ್ಕೃತ ವಿದ್ವಾಂಸರು ಈ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಆಗ ಕನ್ನಡ ಭಾಷೆಯ ಬಿಗಿ ಹಾಗೂ ವ್ಯಾಪ್ತಿ ಹೆಚ್ಚಾಗುತ್ತದೆ’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಸಲಹೆ ನೀಡಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ ಲಯದಲ್ಲಿ ಶನಿವಾರ ನಡೆದ ಸಂಸ್ಕೃತ ಪುಸ್ತಕಗಳ ಬಿಡುಗಡೆ ಹಾಗೂ ಸಂಸ್ಕೃತ ಸಂಜೆ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.<br /> <br /> ‘ಒಬ್ಬೊಬ್ಬ ವಿದ್ವಾಂಸ ಒಂದೊಂದು ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಸಾಕು. 10 ವರ್ಷಗಳಲ್ಲಿ 10 ಸಾವಿರ ಪುಸ್ತಕಗಳು ಕನ್ನಡಕ್ಕೆ ಸೇರ್ಪಡೆಯಾಗು ತ್ತವೆ. ಜೊತೆಗೆ ಸಂಸ್ಕೃತದ ಸಾರವನ್ನು ಕನ್ನಡಿಗರಿಗೆ ತಿಳಿಸಲು ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.<br /> <br /> ‘ದೇಶದಲ್ಲಿ ಎರಡು ಶತಮಾನಗಳ ಕಾಲ ಸಂಸ್ಕೃತಕ್ಕೆ ದುರವಸ್ಥೆ ಬಂದಿತ್ತು. ಮೆಕಾಲೆ ಮಹಾಶಯ ಜಾರಿಗೆ ತಂದ ಶಿಕ್ಷಣ ನೀತಿಯಿಂದ ಇಂಗ್ಲಿಷ್ ಭಾಷೆಗೆ ಮೊದಲ ಪ್ರಾಧಾನ್ಯ ದೊರಕಿತು. ಬಳಿಕ ಮೆಕಾಲೆ ತನ್ನ ತಂದೆಗೆ ‘ಭಾರತೀಯರು ಈ ಮೂಲಕ ಇಂಗ್ಲೆಂಡಿನ ಶಾಶ್ವತ ಸೇವಕರಾಗಿ ಉಳಿಯುತ್ತಾರೆ’ ಎಂದು ಪತ್ರ ಬರೆದಿದ್ದ. ಆ ಮಾತು ಸತ್ಯವಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷೆ ಬಗ್ಗೆ ಯುವಕರಲ್ಲಿ ಒಲವು ಹೆಚ್ಚುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.<br /> <br /> ರಾಜ್ಯಪಾಲ ಎಚ್.ಆರ್. ಭಾರ ದ್ವಾಜ್ ಪುಸ್ತಕ ಬಿಡುಗಡೆ ಮಾಡಿ, ‘ಜಗತ್ತಿನ ಅತೀ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿದೇಶಿಯರಿಗೂ ಹೆಚ್ಚಿನ ಸಂಸ್ಕೃತ ಪ್ರೀತಿ ಇದೆ’ ಎಂದರು.<br /> <br /> ‘ಕನ್ನಡ ಭಾಷೆಯ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ಇದೆ. ಕನ್ನಡದಲ್ಲಿ ಶೇ 60ರಷ್ಟು ಸಂಸ್ಕೃತ ಪದಗಳು, ತೆಲುಗುವಿನಲ್ಲೂ ಶೇ 60 ಸಂಸ್ಕೃತ ಪದಗಳು ಸೇರಿವೆ. ಪರಸ್ಪರ ಪೂರಕವಾಗಿ ಎರಡೂ ಭಾಷೆ ಬೆಳೆಯಬೇಕು’ ಎಂದರು.<br /> <br /> ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಸಂಜೆ ಕಾಲೇಜು ಉದ್ಘಾಟಿಸಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತವು ಇಂಗ್ಲಿಷ್ ಸರಿಸಮನಾದ ಭಾಷೆ. ಜನರಲ್ಲಿ ನೈತಿಕ ಮಟ್ಟ ಹೆಚ್ಚಿಸಲು ಸಂಸ್ಕೃತ ಭಾಷೆಯ ಪುನರುಜ್ಜೀವನ ಆಗಬೇಕು’ ಎಂದರು.<br /> <br /> ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ವಿ.ವಿ.ಗೆ ಶೀಘ್ರದಲ್ಲೇ 100 ಎಕರೆ ಜಮೀನು ದೊರಕಲಿದೆ. ಆಗ ಇನ್ನಷ್ಟು ವೇಗವಾಗಿ ಸಂಸ್ಕೃತ ಕಲಿಕಾ ಚಟುವಟಿಕೆಗಳನ್ನು ನಡೆಸಬಹುದು’ ಎಂದರು.<br /> <br /> ‘ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು, ನಿವೃತ್ತರಲ್ಲಿ ಸಂಸ್ಕೃತ ಅಧ್ಯಯನ ಆಸಕ್ತಿ ಹೆಚ್ಚಿಸಲು ಸಂಜೆ ಕಾಲೇಜು ಆರಂಭಿಸಲಾಗಿದೆ. ನಗರ ಕೇಂದ್ರದಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ತರಗತಿಗೆ 50ಕ್ಕೂ ಅಧಿಕ ಮಂದಿ ಪ್ರವೇಶ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸಂಸ್ಕೃತದಲ್ಲಿ ಶಾಸ್ತ್ರಗ್ರಂಥಗಳು ಸಾವಿರಾರು ಇವೆ. ನಾಡಿನಲ್ಲಿರುವ ಸಂಸ್ಕೃತ ವಿದ್ವಾಂಸರು ಈ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಆಗ ಕನ್ನಡ ಭಾಷೆಯ ಬಿಗಿ ಹಾಗೂ ವ್ಯಾಪ್ತಿ ಹೆಚ್ಚಾಗುತ್ತದೆ’ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಸಲಹೆ ನೀಡಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾ ಲಯದಲ್ಲಿ ಶನಿವಾರ ನಡೆದ ಸಂಸ್ಕೃತ ಪುಸ್ತಕಗಳ ಬಿಡುಗಡೆ ಹಾಗೂ ಸಂಸ್ಕೃತ ಸಂಜೆ ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.<br /> <br /> ‘ಒಬ್ಬೊಬ್ಬ ವಿದ್ವಾಂಸ ಒಂದೊಂದು ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಸಾಕು. 10 ವರ್ಷಗಳಲ್ಲಿ 10 ಸಾವಿರ ಪುಸ್ತಕಗಳು ಕನ್ನಡಕ್ಕೆ ಸೇರ್ಪಡೆಯಾಗು ತ್ತವೆ. ಜೊತೆಗೆ ಸಂಸ್ಕೃತದ ಸಾರವನ್ನು ಕನ್ನಡಿಗರಿಗೆ ತಿಳಿಸಲು ಸಾಧ್ಯವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.<br /> <br /> ‘ದೇಶದಲ್ಲಿ ಎರಡು ಶತಮಾನಗಳ ಕಾಲ ಸಂಸ್ಕೃತಕ್ಕೆ ದುರವಸ್ಥೆ ಬಂದಿತ್ತು. ಮೆಕಾಲೆ ಮಹಾಶಯ ಜಾರಿಗೆ ತಂದ ಶಿಕ್ಷಣ ನೀತಿಯಿಂದ ಇಂಗ್ಲಿಷ್ ಭಾಷೆಗೆ ಮೊದಲ ಪ್ರಾಧಾನ್ಯ ದೊರಕಿತು. ಬಳಿಕ ಮೆಕಾಲೆ ತನ್ನ ತಂದೆಗೆ ‘ಭಾರತೀಯರು ಈ ಮೂಲಕ ಇಂಗ್ಲೆಂಡಿನ ಶಾಶ್ವತ ಸೇವಕರಾಗಿ ಉಳಿಯುತ್ತಾರೆ’ ಎಂದು ಪತ್ರ ಬರೆದಿದ್ದ. ಆ ಮಾತು ಸತ್ಯವಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷೆ ಬಗ್ಗೆ ಯುವಕರಲ್ಲಿ ಒಲವು ಹೆಚ್ಚುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.<br /> <br /> ರಾಜ್ಯಪಾಲ ಎಚ್.ಆರ್. ಭಾರ ದ್ವಾಜ್ ಪುಸ್ತಕ ಬಿಡುಗಡೆ ಮಾಡಿ, ‘ಜಗತ್ತಿನ ಅತೀ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿದೇಶಿಯರಿಗೂ ಹೆಚ್ಚಿನ ಸಂಸ್ಕೃತ ಪ್ರೀತಿ ಇದೆ’ ಎಂದರು.<br /> <br /> ‘ಕನ್ನಡ ಭಾಷೆಯ ಮೇಲೆ ಸಂಸ್ಕೃತ ಭಾಷೆಯ ಪ್ರಭಾವ ಇದೆ. ಕನ್ನಡದಲ್ಲಿ ಶೇ 60ರಷ್ಟು ಸಂಸ್ಕೃತ ಪದಗಳು, ತೆಲುಗುವಿನಲ್ಲೂ ಶೇ 60 ಸಂಸ್ಕೃತ ಪದಗಳು ಸೇರಿವೆ. ಪರಸ್ಪರ ಪೂರಕವಾಗಿ ಎರಡೂ ಭಾಷೆ ಬೆಳೆಯಬೇಕು’ ಎಂದರು.<br /> <br /> ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಸಂಜೆ ಕಾಲೇಜು ಉದ್ಘಾಟಿಸಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತವು ಇಂಗ್ಲಿಷ್ ಸರಿಸಮನಾದ ಭಾಷೆ. ಜನರಲ್ಲಿ ನೈತಿಕ ಮಟ್ಟ ಹೆಚ್ಚಿಸಲು ಸಂಸ್ಕೃತ ಭಾಷೆಯ ಪುನರುಜ್ಜೀವನ ಆಗಬೇಕು’ ಎಂದರು.<br /> <br /> ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ವಿ.ವಿ.ಗೆ ಶೀಘ್ರದಲ್ಲೇ 100 ಎಕರೆ ಜಮೀನು ದೊರಕಲಿದೆ. ಆಗ ಇನ್ನಷ್ಟು ವೇಗವಾಗಿ ಸಂಸ್ಕೃತ ಕಲಿಕಾ ಚಟುವಟಿಕೆಗಳನ್ನು ನಡೆಸಬಹುದು’ ಎಂದರು.<br /> <br /> ‘ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು, ನಿವೃತ್ತರಲ್ಲಿ ಸಂಸ್ಕೃತ ಅಧ್ಯಯನ ಆಸಕ್ತಿ ಹೆಚ್ಚಿಸಲು ಸಂಜೆ ಕಾಲೇಜು ಆರಂಭಿಸಲಾಗಿದೆ. ನಗರ ಕೇಂದ್ರದಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ತರಗತಿಗೆ 50ಕ್ಕೂ ಅಧಿಕ ಮಂದಿ ಪ್ರವೇಶ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>