<p><strong>ಮುಂಬೈ:</strong> ಇಲ್ಲಿನ ಕರ್ನಾಟಕ ಸಂಘ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯನ್ನು ಮುಂದಿನ ವರ್ಷದ ಜನವರಿ 17, 18, 19 ರಂದು ಹಮ್ಮಿಕೊಂಡಿದೆ.<br /> <br /> ನಾಟಕದ ಅವಧಿ ಕನಿಷ್ಠ 45 ನಿಮಿಷ ಹಾಗೂ ಗರಿಷ್ಠ 60 ನಿಮಿಷ. ಪ್ರತೀ ತಂಡಕ್ಕೆ ಗೌರವ ಸಂಭಾವನೆಯಾಗಿ ₨4,000 ನೀಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ₨10,000 ದ್ವಿತೀಯ ಬಹುಮಾನ ₨7000 ಹಾಗೂ ತೃತೀಯ ಬಹುಮಾನ ₨5000 ನೀಡಲಾಗುವುದು. ಮುಂಬೈಯ ಅತ್ಯುತ್ತಮ ನಾಟಕಕ್ಕೆ ವಿಶೇಷ ಬಹುಮಾನ ದೊರೆಯಲಿದೆ. ತಂಡಗಳಿಗೆ ವಸತಿ ಸೌಕರ್ಯವನ್ನು ಸಂಘ ಕಲ್ಪಿಸಲಿದೆ. ಹೊಸ ನಾಟಕ ಕೃತಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.<br /> <br /> ಆಸಕ್ತ ತಂಡಗಳು ₨500 ಪ್ರವೇಶ ಧನದ ಜತೆಗೆ ನವೆಂಬರ್ 15ರ ಒಳಗೆ ಈ ಕೆಳಗಿನ ವಿಳಾಸಕ್ಕೆ ತಮ್ಮ ನಾಟಕದ ಪಠ್ಯದೊಂದಿಗೆ ಸಂಪೂರ್ಣ ವಿವರ ಹಾಗೂ ಪ್ರವೇಶ ಪತ್ರವನ್ನು ಸಲ್ಲಿಸಬೇಕು ಎಂದು ಕೋರಿದ್ದಾರೆ. ಪ್ರವೇಶ ಪತ್ರವನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಡಾ. ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಂ. ಮಾರ್ಗ್ ಮುಂಬೈ 400 016 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಇಲ್ಲಿನ ಕರ್ನಾಟಕ ಸಂಘ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯನ್ನು ಮುಂದಿನ ವರ್ಷದ ಜನವರಿ 17, 18, 19 ರಂದು ಹಮ್ಮಿಕೊಂಡಿದೆ.<br /> <br /> ನಾಟಕದ ಅವಧಿ ಕನಿಷ್ಠ 45 ನಿಮಿಷ ಹಾಗೂ ಗರಿಷ್ಠ 60 ನಿಮಿಷ. ಪ್ರತೀ ತಂಡಕ್ಕೆ ಗೌರವ ಸಂಭಾವನೆಯಾಗಿ ₨4,000 ನೀಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ₨10,000 ದ್ವಿತೀಯ ಬಹುಮಾನ ₨7000 ಹಾಗೂ ತೃತೀಯ ಬಹುಮಾನ ₨5000 ನೀಡಲಾಗುವುದು. ಮುಂಬೈಯ ಅತ್ಯುತ್ತಮ ನಾಟಕಕ್ಕೆ ವಿಶೇಷ ಬಹುಮಾನ ದೊರೆಯಲಿದೆ. ತಂಡಗಳಿಗೆ ವಸತಿ ಸೌಕರ್ಯವನ್ನು ಸಂಘ ಕಲ್ಪಿಸಲಿದೆ. ಹೊಸ ನಾಟಕ ಕೃತಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.<br /> <br /> ಆಸಕ್ತ ತಂಡಗಳು ₨500 ಪ್ರವೇಶ ಧನದ ಜತೆಗೆ ನವೆಂಬರ್ 15ರ ಒಳಗೆ ಈ ಕೆಳಗಿನ ವಿಳಾಸಕ್ಕೆ ತಮ್ಮ ನಾಟಕದ ಪಠ್ಯದೊಂದಿಗೆ ಸಂಪೂರ್ಣ ವಿವರ ಹಾಗೂ ಪ್ರವೇಶ ಪತ್ರವನ್ನು ಸಲ್ಲಿಸಬೇಕು ಎಂದು ಕೋರಿದ್ದಾರೆ. ಪ್ರವೇಶ ಪತ್ರವನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಡಾ. ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಂ. ಮಾರ್ಗ್ ಮುಂಬೈ 400 016 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>