ನ್ಯಾಯಮೂರ್ತಿ ಆರ್ ಎಂ ಲೋಧಾ ನೇತೃತ್ವದ ಪೀಠ, ಗೃಹ ಕಾರ್ಯದರ್ಶಿ ಮೂಲಕ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ಈ ವೇಳೆ, ವಕೀಲರೂ ಆಗಿರುವ ಅರ್ಜಿದಾರ ಎಂ ಎಲ್ ಶರ್ಮಾ ಅವರು ‘ಕಾನೂನು ನಿರೂಪಕರೇ ಕಾನೂನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ವಾದಿಸಿದರು. ಇದರಿಂದ ಭಿನ್ನ ವ್ಯಕ್ತಿತ್ವಗಳು ಇರಲು ಸಾಧ್ಯವಿಲ್ಲ ಎಂದು ಗಮನಿಸಿದ ಪೀಠ, ದೆಹಲಿ ಸರ್ಕಾರಕ್ಕೂ ನೋಟಿಸ್ ಜಾರಿಗೊಳಿಸಿತು.