ಮಂಡ್ಯ: ಇಲ್ಲಿನ ಬುದ್ಧ ಭಾರತ ಫೌಂಡೇಷನ್ ವತಿಯಿಂದ ‘ಭಗವಾನ್ ಗೌತಮ ಬುದ್ಧ ಬೋಧಿಸಿದ ವಿಷಯಗಳು ಪ್ರಸ್ತುತ ಸಮಾಜಕ್ಕೆ ಎಷ್ಟು ಉಪಕಾರವಾಗಿವೆ’ ಎಂಬ ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ.
ಪಿಯುವರೆಗಿನ ವಿದ್ಯಾರ್ಥಿಗಳು ಹಾಗೂ ಪಿಯು ನಂತರ ವಿದ್ಯಾರ್ಥಿಗಳೆಂದು ಎರಡು ವಿಭಾಗ ಮಾಡಲಾಗಿದ್ದು, ಪ್ರತಿ ವಿಭಾಗದಲ್ಲಿ ತಲಾ ₹ 10,001 (ಪ್ರಥಮ), ₹ 7,500 (ದ್ವಿತೀಯ), ₹ 5000 (ತೃತೀಯ) ಹಾಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
2 ಸಾವಿರ ಪದಗಳಿಗೆ ಮೀರದಂತೆ ಪ್ರಬಂಧ ಬರೆದು ಜ. 31ರ ಒಳಗೆ ಕಳುಹಿಸಿಕೊಡಬೇಕು. ಮೇ 4ರಂದು ನಡೆಯುವ ‘ಗೌತಮ ಬುದ್ಧನ 2,549ನೇ ಜನ್ಮದಿನ’ದ ಅಂಗವಾಗಿ ನಗರದ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಕಾರ್ಯದರ್ಶಿ ಜೆ. ರಾಮಯ್ಯ ತಿಳಿಸಿದ್ದಾರೆ.
ಪ್ರಬಂಧಗಳನ್ನು ಜೆ. ರಾಮಯ್ಯ, ಕಾರ್ಯದರ್ಶಿ, ಬುದ್ಧ ಭಾರತ ಫೌಂಡೇಷನ್, ಸುಂದ್ರಪ್ಪ ಬಿಲ್ಡಿಂಗ್, 8ನೇ ಕ್ರಾಸ್, ಸುಭಾಷ್ನಗರ, ಮಂಡ್ಯ– 571401 ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 98455 38685, 97313 56715 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.