ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವುಂಡರಾಯ ಪ್ರಶಸ್ತಿ ಪ್ರದಾನ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಶೋಧನಾ ವಿಧಾನ ಮತ್ತು ನಿರೂಪಣೆ ಸಂಶೋಧನೆಯ ಮೌಲ್ಯವನ್ನು ನಿರ್ಧರಿಸುತ್ತವೆ’ ಎಂದು  ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಸಾಹಿತಿ ಡಾ.ಸರಸ್ವತಿ ವಿಜಯ­ಕುಮಾರ್‌ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಮಾತ­ನಾಡಿ­,‘ಸಂಶೋಧನೆಗೆ ವೈಜ್ಞಾನಿಕ ವಿಧಾನ­ವನ್ನು ಅಳವಡಿಸಿಕೊಂಡರೆ ಸಂಶೋಧನಾ ಕೃತಿಗೆ ಗಟ್ಟಿತನ ಬರುತ್ತದೆ.  ನಿರೂಪಣಾ ವಿಧಾನ­ವನ್ನು ಕರಗತ ಮಾಡಿಕೊಂಡವನೆ ನಿಜ­ವಾದ ಪಂಡಿತ. ಎಲ್ಲರಿಗೂ ಅರ್ಥ­ವಾಗುವ ರೀತಿಯಲ್ಲಿ ಸರಳವಾದ ನಿರೂ­ಪಣಾ ವಿಧಾನ ಇರಬೇಕು. ಆಗ ಮಾತ್ರ  ಕೃತಿಯ ಮೌಲ್ಯ ಹೆಚ್ಚುತ್ತದೆ’ ಎಂದರು.

ಸರಸ್ವತಿ ವಿಜಯಕುಮಾರ್ ಅವರ ಕೃತಿ­ಗಳನ್ನು ಗಮನಿಸಿದರೆ ಶ್ರದ್ಧೆ, ಪ್ರಯತ್ನ­ಪೂರ್ವಕವಾಗಿ ಸಾಮಾನ್ಯ ಜನರಿಗೆ ನಿಲು­ಕುವ ಹಾಗೆ ನಿರೂಪಣಾ  ಶೈಲಿಯನ್ನು ಅಳವಡಿಸಿ­ಕೊಂಡಿರುವುದು ತಿಳಿ­ಯು­ತ್ತದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತ­ನಾಡಿ, ಶ್ರವಣ­ಬೆಳಗೊಳದ ಚಾರು­ಕೀರ್ತಿ ಭಟ್ಟಾರಕ ಸ್ವಾಮಿ­ಗಳು ಪರಿಷತ್ತಿ­ನಲ್ಲಿ ಚಾವುಂಡರಾಯನ ಹೆಸ­­ರಿನಲ್ಲಿ ಸ್ಥಾಪಿ­ಸಿರುವ ₨2 ಲಕ್ಷ ದತ್ತಿ ನಿಧಿ­­ಯಿಂದ ಪ್ರಶಸ್ತಿ ನೀಡಲಾಗು­ತ್ತಿದೆ ಎಂದರು.

ಪ್ರಶಸ್ತಿಯು ₨20 ಸಾವಿರ ನಗದು, ಪ್ರಶಸ್ತಿ ಫಲಕ ಒಳ­ಗೊಂಡಿದೆ. ಇತರ ಪ್ರಶ­ಸ್ತಿ­ಗಳು  ಲಕ್ಷಾಂ­ತರ ರೂಪಾಯಿಗಳ ಗೌರ­ವ­ಧನ­ವನ್ನು ನೀಡುತ್ತಿರುವುದರಿಂದ ಈ ಪ್ರಶಸ್ತಿಯ ದತ್ತಿ ಹೆಚ್ಚಿಸಬೇಕು ಎಂದು ಶ್ರೀಮಠಕ್ಕೆ ಒತ್ತಾಯ ಮಾಡಲಾಗಿತ್ತು. ಅದನ್ನು ಪರಿಗಣಿಸಿ ಹೆಚ್ಚಿನ ₨2 ಲಕ್ಷಗಳ ದತ್ತಿಯನ್ನು ನೀಡಿದ್ದಾರೆ. ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತವನ್ನು ₨ 40 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದರು.
ಸಾಹಿತಿ ಡಾ.ಎಂ.ಎ.ಜಯಚಂದ್ರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT