<p><strong>ಬೆಂಗಳೂರು: ‘</strong>ಕಾದಂಬರಿ ಪ್ರಕಾರವು ಇಂದು ತನ್ನ ಚೌಕಟ್ಟಿನಲ್ಲಿ ಉಳಿದಿಲ್ಲ. ಕಾದಂಬರಿ ರಚನೆಯು ವಿಸ್ತಾರತೆ ಪಡೆದುಕೊಂಡಿದೆ’ ಎಂದು ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.<br /> <br /> ಪಾಂಚಜನ್ಯ ಪಬ್ಲಿಕೇಷನ್ಸ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕ ಜಕ್ಕಣಿಕ್ಕಿ ಎಂ.ದಯಾನಂದ ಅವರ ‘ನರಸಾಪುರ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> ‘ನರಸಾಪುರ ಕಾದಂಬರಿ ವಿಶೇಷ ಬರವಣಿಗೆಯಿಂದ ಕೂಡಿದೆ. ಕಾದಂಬರಿಯಲ್ಲಿ ಗ್ರಾಮ ಬದುಕಿನ ಕಥನವಿದೆ. ಕೃತಿಯಲ್ಲಿ ಹಳ್ಳಿಯ ಬದುಕು ಮಾತನಾಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ನಡವಳಿಕೆ ಹಾಗೂ ಆಗುಹೋಗುಗಳ ಕುರಿತ ಕಥನ ಇಲ್ಲಿದೆ’ ಎಂದು ಹೇಳಿದರು.<br /> <br /> ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಕುವೆಂಪು ಅವರ ಕೃತಿಗಳಲ್ಲಿ ಮದುಮಗಳಾಗಿದ್ದ ಮಲೆನಾಡು, ತೇಜಸ್ವಿ ಅವರ ಕಾಲಕ್ಕೆ ಬೆಲೆವೆಣ್ಣಾಗಿ ರೂಪ ಪಡೆಯುತ್ತದೆ. ಜಕ್ಕಣಿಕ್ಕಿ ಅವರ ಕಾಲಕ್ಕೆ ಮಲೆನಾಡು ಮುದುಕಿಯ ರೂಪ ಪಡೆದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಕಾದಂಬರಿ ಪ್ರಕಾರವು ಇಂದು ತನ್ನ ಚೌಕಟ್ಟಿನಲ್ಲಿ ಉಳಿದಿಲ್ಲ. ಕಾದಂಬರಿ ರಚನೆಯು ವಿಸ್ತಾರತೆ ಪಡೆದುಕೊಂಡಿದೆ’ ಎಂದು ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.<br /> <br /> ಪಾಂಚಜನ್ಯ ಪಬ್ಲಿಕೇಷನ್ಸ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕ ಜಕ್ಕಣಿಕ್ಕಿ ಎಂ.ದಯಾನಂದ ಅವರ ‘ನರಸಾಪುರ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.<br /> <br /> ‘ನರಸಾಪುರ ಕಾದಂಬರಿ ವಿಶೇಷ ಬರವಣಿಗೆಯಿಂದ ಕೂಡಿದೆ. ಕಾದಂಬರಿಯಲ್ಲಿ ಗ್ರಾಮ ಬದುಕಿನ ಕಥನವಿದೆ. ಕೃತಿಯಲ್ಲಿ ಹಳ್ಳಿಯ ಬದುಕು ಮಾತನಾಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ನಡವಳಿಕೆ ಹಾಗೂ ಆಗುಹೋಗುಗಳ ಕುರಿತ ಕಥನ ಇಲ್ಲಿದೆ’ ಎಂದು ಹೇಳಿದರು.<br /> <br /> ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಕುವೆಂಪು ಅವರ ಕೃತಿಗಳಲ್ಲಿ ಮದುಮಗಳಾಗಿದ್ದ ಮಲೆನಾಡು, ತೇಜಸ್ವಿ ಅವರ ಕಾಲಕ್ಕೆ ಬೆಲೆವೆಣ್ಣಾಗಿ ರೂಪ ಪಡೆಯುತ್ತದೆ. ಜಕ್ಕಣಿಕ್ಕಿ ಅವರ ಕಾಲಕ್ಕೆ ಮಲೆನಾಡು ಮುದುಕಿಯ ರೂಪ ಪಡೆದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>