ದಾದ್ರಿ ಘಟನೆ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಗಳು ಕ್ರಮವಾಗಿ ಸಮಾಜವಾದಿ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ ಹಾಗೂ ಕಾಂಗ್ರೆಸ್ ಆಡಳಿತಾರೂಢ ಕರ್ನಾಟಕದಲ್ಲಿ ನಡೆದಿವೆ. ‘ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಪರೀಧಿಗೆ ಬರುವ ವಿಚಾರ. ನಿಮಗೆಲ್ಲ ಇದು ತಿಳಿದಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.