ಇಂಥ ಘಟನೆಗಳ ಬಗ್ಗೆ ತಮ್ಮ ಪಕ್ಷದ ನಿಲುವಿನ ಕುರಿತು ಮಾತನಾಡಿರುವ ಮೋದಿ, ‘ಇಂಥ ಘಟನೆಗಳಿಗೆ ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ. ಇಂಥ ಘಟನೆಗಳ ಮೂಲಕ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಕೋಮುವಾದ ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ, ಅವರೇ ಸ್ವತಃ ಧ್ರುವೀಕರಣ ರಾಜಕೀಯ ಮಾಡುತ್ತಿಲ್ಲವೇ?’ ಎಂದು ಕೇಳಿದ್ದಾರೆ.
‘ಹಿಂದೆಯೂ ಇಂಥ ಚರ್ಚೆಗಳು ನಡೆದಿವೆ. ಬಿಜೆಪಿ ಯಾವಾಗಲೂ ಮಿಥ್ಯಾ ಜಾತ್ಯತೀತೆಯನ್ನು ವಿರೋಧಿಸಿದೆ. ಇದೀಗ ಮತ್ತೆ ದುರದೃಷ್ಟಕರ ಸಾಮಾಜಿಕ ಅಸ್ವಸ್ಥತೆಯ ಮುಖವಾಡದಲ್ಲಿ ಈ ಚರ್ಚೆ ನಡೆಯುತ್ತಿದೆ, ಈ ವಾಗ್ವಾದವನ್ನು ಮಾತುಕತೆ ಹಾಗೂ ಚರ್ಚೆಯ ಮೂಲಕ ಪರಿಹರಿಸಬಹುದು’ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದಾರೆ.