<p><strong>ಬೆಂಗಳೂರು: </strong>ಹೆಗ್ಗೋಡಿನ ನೀಲ ಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಮೇ 11ರಿಂದ 31ರವರೆಗೆ ರಂಗ ತರಬೇತಿ ಶಿಬಿರ ಆಯೋಜಿಸ ಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.<br /> <br /> 18ರಿಂದ 35ರ ನಡುವಿನ ವಯಸ್ಸಿನವರಿಗೆ ಪಾಲ್ಗೊಳ್ಳಲು ಅವಕಾಶ ವಿದೆ. ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಓದಿರಬೇಕು. ಶಿಬಿರದ ಅವಧಿಯಲ್ಲಿ ಊಟ–ವಸತಿ ವೆಚ್ಚವಾಗಿ ₨ 3,500ಪಾವತಿಸಬೇಕು. ಅರ್ಜಿಯ ವಿವರಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ನೀನಾಸಂ ಪ್ರಕಟಣೆ ತಿಳಿಸಿದೆ.<br /> <br /> ಶಿಬಿರದಲ್ಲಿ ರಂಗ ಮಾಧ್ಯಮದ ಬಗ್ಗೆ ಮಾಹಿತಿ, ನುರಿತ ನಿರ್ದೇಶಕರಿಂದ ನಾಟಕ ಪ್ರಯೋಗಗಳನ್ನು ಮಾಡಿಸ ಲಾಗುತ್ತದೆ. ಆಸಕ್ತರು ನೀನಾಸಂನಿಂದ ಪ್ರವೇಶ ಪತ್ರ ತರಿಸಿಕೊಂಡು, ಅದನ್ನು ಭರ್ತಿ ಮಾಡಿ ಏಪ್ರಿಲ್ 20ರೊಳಗೆ ಕಳುಹಿಸಬೇಕು. ಅಥವಾ ನೀನಾಸಂ ವೆಬ್ಸೈಟ್ (www.ninasam.org) ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಬಹುದು. ಶಿಬಿರಕ್ಕೆ ಆಯ್ಕೆಯಾದ ವರಿಗೆ ಏ. 30ರೊಳಗೆ ಮಾಹಿತಿ ನೀಡಲಾಗುತ್ತದೆ. ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ 577 417.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹೆಗ್ಗೋಡಿನ ನೀಲ ಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಮೇ 11ರಿಂದ 31ರವರೆಗೆ ರಂಗ ತರಬೇತಿ ಶಿಬಿರ ಆಯೋಜಿಸ ಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.<br /> <br /> 18ರಿಂದ 35ರ ನಡುವಿನ ವಯಸ್ಸಿನವರಿಗೆ ಪಾಲ್ಗೊಳ್ಳಲು ಅವಕಾಶ ವಿದೆ. ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಓದಿರಬೇಕು. ಶಿಬಿರದ ಅವಧಿಯಲ್ಲಿ ಊಟ–ವಸತಿ ವೆಚ್ಚವಾಗಿ ₨ 3,500ಪಾವತಿಸಬೇಕು. ಅರ್ಜಿಯ ವಿವರಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ನೀನಾಸಂ ಪ್ರಕಟಣೆ ತಿಳಿಸಿದೆ.<br /> <br /> ಶಿಬಿರದಲ್ಲಿ ರಂಗ ಮಾಧ್ಯಮದ ಬಗ್ಗೆ ಮಾಹಿತಿ, ನುರಿತ ನಿರ್ದೇಶಕರಿಂದ ನಾಟಕ ಪ್ರಯೋಗಗಳನ್ನು ಮಾಡಿಸ ಲಾಗುತ್ತದೆ. ಆಸಕ್ತರು ನೀನಾಸಂನಿಂದ ಪ್ರವೇಶ ಪತ್ರ ತರಿಸಿಕೊಂಡು, ಅದನ್ನು ಭರ್ತಿ ಮಾಡಿ ಏಪ್ರಿಲ್ 20ರೊಳಗೆ ಕಳುಹಿಸಬೇಕು. ಅಥವಾ ನೀನಾಸಂ ವೆಬ್ಸೈಟ್ (www.ninasam.org) ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಬಹುದು. ಶಿಬಿರಕ್ಕೆ ಆಯ್ಕೆಯಾದ ವರಿಗೆ ಏ. 30ರೊಳಗೆ ಮಾಹಿತಿ ನೀಡಲಾಗುತ್ತದೆ. ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ 577 417.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>