<p><strong>ಬೇಲೂರು:</strong> ಸಿರಿಗನ್ನಡಂಗಳಿಗೆ (ಸಿರಿಗನ್ನಡಂ ಗೆಲ್ಗೆ) ಸಿರಿಗನ್ನಡಂ ಬಾಳೆಗೆ (ಸಿರಿಗನ್ನಡಂ ಬಾಳ್ಗೆ) ಪರಿಷತು (ಪರಿಷತ್ತು) ನಡೆಯಲ್ಲಿದೆ (ನಡೆಯಲಿದೆ) ಉದ್ಗಘಟನೆ (ಉದ್ಘಾಟನೆ) ಸಮರೂಪ (ಸಮಾರೋಪ) ಸಂಸ್ಕೃತಿಕ (ಸಾಂಸ್ಕೃತಿಕ) ಜರುಗಲ್ಲಿದೆ (ಜರುಗಲಿದೆ) ತವುಗಳು (ತಾವುಗಳು) ಕಾರ್ಯಕ್ರರ್ಮವನ್ನು (ಕಾರ್ಯಕ್ರಮವನ್ನು) ಯಶ್ಸವಿಗೊಳಿಸಲು (ಯಶಸ್ವಿಗೊಳಿಸಲು)... ಆವರಣದಲ್ಲಿರುವುದು ಸರಿಯಾದ ಪದ)</p>.<p>-ಇದೇನು ಇಷ್ಟೊಂದು ತಪ್ಪುಗಳು! ಇದನ್ನು ಯಾರು ಬರೆದಿರಬಹುದು? ಏಕೆ ಬರೆದಿರಬಹುದು ಎಂದು ಯೋಚಿಸುತ್ತಿರುವಿರಾ? ಇದೊಂದು ಅಂಚೆ ಪತ್ರ.<br /> <br /> ಕಾರ್ಯಕ್ರಮದಲ್ಲಿ ಭಾಗವಹಿಸಲು ಸದಸ್ಯರಿಗೆ ನೀಡಿರುವ ಆಹ್ವಾನ. ಇದನ್ನು ಬರೆದಿರುವುದು ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು. ಅಚ್ಚರಿಯಾದರೂ ಇದು ಸತ್ಯ.<br /> <br /> ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನ. 16 ಮತ್ತು 17ರಂದು ಹಲ್ಮಿಡಿ ಮತ್ತು ಬೇಲೂರು ಪಟ್ಟಣದಲ್ಲಿ ‘ಹಲ್ಮಿಡಿ ಉತ್ಸವ’ ನಡೆಸುತ್ತಿದೆ. ಇದಕ್ಕೆ ತಾಲ್ಲೂಕಿನ ಸದಸ್ಯರನ್ನು ಆಹ್ವಾನಿಸುವ ಸಲುವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸದಸ್ಯರಿಗೆ ಅಂಚೆ ಕಾರ್ಡ್ ಬರೆದಿದೆ. ಈ ಪತ್ರದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ಇದಕ್ಕೆ ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿ ಮಹೇಶ್ ಸಹಿ ಮಾಡಿದ್ದಾರೆ.<br /> <br /> ಸಾಹಿತ್ಯ ಪರಿಷತ್ತು ಬರೆದ ಪತ್ರದಲ್ಲಿಯೇ ಇಷ್ಟೊಂದು ತಪ್ಪುಗಳು ಇರುವುದನ್ನು ನೋಡಿದರೆ ಕನ್ನಡದ ಸ್ಥಿತಿಯನ್ನು ನೆನೆದು ಕಣ್ಣೀರಿಡುವಂತಾಗಿದೆ. ಕನ್ನಡದ ತವರು ನೆಲದಲ್ಲಿ ಕನ್ನಡಮ್ಮನ ಈ ಗತಿ ನೆನೆದು ಅಯ್ಯೋ ಎನ್ನುವಂತಾಗಿದೆ. ಯಾವುದೋ ಸಂಘ–ಸಂಸ್ಥೆ ಈ ರೀತಿ ತಪ್ಪುಗಳನ್ನು ಬರೆದಿದ್ದರೆ, ಕ್ಷಮಿಸಬಹುದಿತ್ತೇನೋ. ಆದರೆ, ಕನ್ನಡಿಗರ ಮಾತೃಸಂಸ್ಥೆಯಾದ ಸಾಹಿತ್ಯ ಪರಿಷತ್ತು ಈ ರೀತಿ ತಪ್ಪುಗಳನ್ನು ಬರೆದರೆ ಕ್ಷಮಿಸಲು ಸಾಧ್ಯವೇ? ಸಾಹಿತ್ಯ ಪರಿಷತ್ತೇ ಕನ್ನಡಕ್ಕೆ ಈ ಸ್ಥಿತಿ ತಂದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ ಎಂದು ಮರುಗುತ್ತಾರೆ ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಕಸಾಪ ಸದಸ್ಯರೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು:</strong> ಸಿರಿಗನ್ನಡಂಗಳಿಗೆ (ಸಿರಿಗನ್ನಡಂ ಗೆಲ್ಗೆ) ಸಿರಿಗನ್ನಡಂ ಬಾಳೆಗೆ (ಸಿರಿಗನ್ನಡಂ ಬಾಳ್ಗೆ) ಪರಿಷತು (ಪರಿಷತ್ತು) ನಡೆಯಲ್ಲಿದೆ (ನಡೆಯಲಿದೆ) ಉದ್ಗಘಟನೆ (ಉದ್ಘಾಟನೆ) ಸಮರೂಪ (ಸಮಾರೋಪ) ಸಂಸ್ಕೃತಿಕ (ಸಾಂಸ್ಕೃತಿಕ) ಜರುಗಲ್ಲಿದೆ (ಜರುಗಲಿದೆ) ತವುಗಳು (ತಾವುಗಳು) ಕಾರ್ಯಕ್ರರ್ಮವನ್ನು (ಕಾರ್ಯಕ್ರಮವನ್ನು) ಯಶ್ಸವಿಗೊಳಿಸಲು (ಯಶಸ್ವಿಗೊಳಿಸಲು)... ಆವರಣದಲ್ಲಿರುವುದು ಸರಿಯಾದ ಪದ)</p>.<p>-ಇದೇನು ಇಷ್ಟೊಂದು ತಪ್ಪುಗಳು! ಇದನ್ನು ಯಾರು ಬರೆದಿರಬಹುದು? ಏಕೆ ಬರೆದಿರಬಹುದು ಎಂದು ಯೋಚಿಸುತ್ತಿರುವಿರಾ? ಇದೊಂದು ಅಂಚೆ ಪತ್ರ.<br /> <br /> ಕಾರ್ಯಕ್ರಮದಲ್ಲಿ ಭಾಗವಹಿಸಲು ಸದಸ್ಯರಿಗೆ ನೀಡಿರುವ ಆಹ್ವಾನ. ಇದನ್ನು ಬರೆದಿರುವುದು ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು. ಅಚ್ಚರಿಯಾದರೂ ಇದು ಸತ್ಯ.<br /> <br /> ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನ. 16 ಮತ್ತು 17ರಂದು ಹಲ್ಮಿಡಿ ಮತ್ತು ಬೇಲೂರು ಪಟ್ಟಣದಲ್ಲಿ ‘ಹಲ್ಮಿಡಿ ಉತ್ಸವ’ ನಡೆಸುತ್ತಿದೆ. ಇದಕ್ಕೆ ತಾಲ್ಲೂಕಿನ ಸದಸ್ಯರನ್ನು ಆಹ್ವಾನಿಸುವ ಸಲುವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸದಸ್ಯರಿಗೆ ಅಂಚೆ ಕಾರ್ಡ್ ಬರೆದಿದೆ. ಈ ಪತ್ರದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ಇದಕ್ಕೆ ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿ ಮಹೇಶ್ ಸಹಿ ಮಾಡಿದ್ದಾರೆ.<br /> <br /> ಸಾಹಿತ್ಯ ಪರಿಷತ್ತು ಬರೆದ ಪತ್ರದಲ್ಲಿಯೇ ಇಷ್ಟೊಂದು ತಪ್ಪುಗಳು ಇರುವುದನ್ನು ನೋಡಿದರೆ ಕನ್ನಡದ ಸ್ಥಿತಿಯನ್ನು ನೆನೆದು ಕಣ್ಣೀರಿಡುವಂತಾಗಿದೆ. ಕನ್ನಡದ ತವರು ನೆಲದಲ್ಲಿ ಕನ್ನಡಮ್ಮನ ಈ ಗತಿ ನೆನೆದು ಅಯ್ಯೋ ಎನ್ನುವಂತಾಗಿದೆ. ಯಾವುದೋ ಸಂಘ–ಸಂಸ್ಥೆ ಈ ರೀತಿ ತಪ್ಪುಗಳನ್ನು ಬರೆದಿದ್ದರೆ, ಕ್ಷಮಿಸಬಹುದಿತ್ತೇನೋ. ಆದರೆ, ಕನ್ನಡಿಗರ ಮಾತೃಸಂಸ್ಥೆಯಾದ ಸಾಹಿತ್ಯ ಪರಿಷತ್ತು ಈ ರೀತಿ ತಪ್ಪುಗಳನ್ನು ಬರೆದರೆ ಕ್ಷಮಿಸಲು ಸಾಧ್ಯವೇ? ಸಾಹಿತ್ಯ ಪರಿಷತ್ತೇ ಕನ್ನಡಕ್ಕೆ ಈ ಸ್ಥಿತಿ ತಂದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ ಎಂದು ಮರುಗುತ್ತಾರೆ ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಕಸಾಪ ಸದಸ್ಯರೊಬ್ಬರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>