<p><strong>ಬೆಂಗಳೂರು:</strong> ‘ಜಾತಿವಾದ ಹಾಗೂ ಕೋಮುವಾದಿಗಳಿಗೆ ಬುದ್ಧಿ ಕಲಿಸಲು ಪ್ರಭುತ್ವಕ್ಕೆ ಹತ್ತಿರ ಹೋಗುತ್ತಲೇ ಅಂತರವನ್ನು ಕಾಪಾಡುವುದು ಸಾಹಿತಿಗಳ ಜವಾಬ್ದಾರಿ’ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಎಂಟಿಸಿ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.<br /> <br /> ‘ಪ್ರಚಾರದಿಂದಲೇ ದೇಶವನ್ನು ಆಳುತ್ತೇನೆ ಎಂದು ಅಹಂಕಾರ ತೋರ್ಪಡಿಸುವವರಿಗೆ ನಾವು ಪೆಟ್ಟು ನೀಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಒಂದು ತೀರ್ಮಾನಕ್ಕೆ ಬಂದೆವು. ಆದರೆ, ನಾಡಿನ ಪ್ರಭುತ್ವಕ್ಕೆ ಎಷ್ಟು ಹತ್ತಿರವಾಗುತ್ತೆವೆಯೋ<br /> ಅಷ್ಟೇ ದೂರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ನೃಪತುಂಗ ಪ್ರಶಸ್ತಿ ಪ್ರದಾನಕ್ಕೆ ಪ್ರತಿವರ್ಷ ಮುಖ್ಯಮಂತ್ರಿ ಗೈರು ಹಾಜರಾಗುತ್ತಿದ್ದಾರೆ. ಮುಂದಿನ ವರ್ಷ ಮುಖ್ಯಮಂತ್ರಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಬೇಕು’ ಎಂದು ವಿನಂತಿಸಿದರು.<br /> <br /> ವಿಮರ್ಶಕ ಬಸವರಾಜ ಕಲ್ಗುಡಿ ಅಭಿನಂದನಾ ಭಾಷಣ ಮಾಡಿ, ‘ಬರಗೂರು ನಮ್ಮ ನಡುವಿನ ವಿಶಿಷ್ಟ ಪ್ರತಿಭೆ. ಅವರು ಮಾನವತಾವಾದಿ. ಸಂಘಟನಾ ಕೌಶಲ ಅವರ ವ್ಯಕ್ತಿತ್ವದಲ್ಲಿ ಅಡಗಿದೆ’ ಎಂದು ಬಣ್ಣಿಸಿದರು.<br /> <br /> ನೃಪತುಂಗ ಪ್ರಶಸ್ತಿಯು ₨ 7,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯುವ ಸಾಹಿತಿಗಳಿಗೆ ಅರಳು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ತಲಾ ₨15,000 ಮೌಲ್ಯ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜಾತಿವಾದ ಹಾಗೂ ಕೋಮುವಾದಿಗಳಿಗೆ ಬುದ್ಧಿ ಕಲಿಸಲು ಪ್ರಭುತ್ವಕ್ಕೆ ಹತ್ತಿರ ಹೋಗುತ್ತಲೇ ಅಂತರವನ್ನು ಕಾಪಾಡುವುದು ಸಾಹಿತಿಗಳ ಜವಾಬ್ದಾರಿ’ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಎಂಟಿಸಿ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.<br /> <br /> ‘ಪ್ರಚಾರದಿಂದಲೇ ದೇಶವನ್ನು ಆಳುತ್ತೇನೆ ಎಂದು ಅಹಂಕಾರ ತೋರ್ಪಡಿಸುವವರಿಗೆ ನಾವು ಪೆಟ್ಟು ನೀಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಒಂದು ತೀರ್ಮಾನಕ್ಕೆ ಬಂದೆವು. ಆದರೆ, ನಾಡಿನ ಪ್ರಭುತ್ವಕ್ಕೆ ಎಷ್ಟು ಹತ್ತಿರವಾಗುತ್ತೆವೆಯೋ<br /> ಅಷ್ಟೇ ದೂರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ನೃಪತುಂಗ ಪ್ರಶಸ್ತಿ ಪ್ರದಾನಕ್ಕೆ ಪ್ರತಿವರ್ಷ ಮುಖ್ಯಮಂತ್ರಿ ಗೈರು ಹಾಜರಾಗುತ್ತಿದ್ದಾರೆ. ಮುಂದಿನ ವರ್ಷ ಮುಖ್ಯಮಂತ್ರಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಬೇಕು’ ಎಂದು ವಿನಂತಿಸಿದರು.<br /> <br /> ವಿಮರ್ಶಕ ಬಸವರಾಜ ಕಲ್ಗುಡಿ ಅಭಿನಂದನಾ ಭಾಷಣ ಮಾಡಿ, ‘ಬರಗೂರು ನಮ್ಮ ನಡುವಿನ ವಿಶಿಷ್ಟ ಪ್ರತಿಭೆ. ಅವರು ಮಾನವತಾವಾದಿ. ಸಂಘಟನಾ ಕೌಶಲ ಅವರ ವ್ಯಕ್ತಿತ್ವದಲ್ಲಿ ಅಡಗಿದೆ’ ಎಂದು ಬಣ್ಣಿಸಿದರು.<br /> <br /> ನೃಪತುಂಗ ಪ್ರಶಸ್ತಿಯು ₨ 7,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯುವ ಸಾಹಿತಿಗಳಿಗೆ ಅರಳು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ತಲಾ ₨15,000 ಮೌಲ್ಯ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>