‘ಹೆಣ್ಣು ಮಕ್ಕಳ ಬದುಕಿನ ಸುಧಾರಣೆಗಳ
ಆಧಾರದ ಮೇಲೆ ಸಮಾಜದ ಪ್ರಗತಿ ಅಳೆಯಬೇಕು’
–ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದ ಮುನ್ನೋಟ ನೀಡಿದರು.
ನಂತರದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ,
‘ಜಾತಿ–ಕುಲ–ಮತ ಧರ್ಮ ಪಾಶಗಳ ಕಡಿದೊಡೆದು
ಎದೆ ಹಿಗ್ಗಿ ಹಾಡಬೇಕು
ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲ್ಲಿ
ಆ ಹಾಡು ಗುಡುಗಬೇಕು’
–ಎಂಬ ಸಾಲುಗಳೊಂದಿಗೆ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಕುರಿತ ಇಲಾಖೆಯ ಕುರಿತು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದು ಕುವೆಂಪು ಅವರ,
‘ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು’
-ಸಾಲುಗಳನ್ನು.