<p><strong>ನವದೆಹಲಿ (ಪಿಟಿಐ, ಐಎಎನ್ಎಸ್): </strong>ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿಯ ಹಿರಿಯ ನಾಯಕ, ಪತ್ರಕರ್ತ ಅರುಣ್ ಶೌ ರಿ ಅವರು, ಕೇಂದ್ರದ ಆರ್ಥಿಕ ನೀತಿ ಗುರಿಯಿಲ್ಲದ್ದು ಮತ್ತು ಈಗಿನ ಸಾಮಾಜಿಕ ವಾತಾವರಣ ಅಲ್ಪಸಂಖ್ಯಾತರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಕಟುವಾಗಿ ಟೀಕಿಸಿದರು.<br /> <br /> ಮೋದಿ ಸರ್ಕಾರದ ಒಂದು ವರ್ಷದ ಆಡಳಿತ ಕೆಲವು ಭಾಗಗಳಲ್ಲಿ ಉತ್ತಮವಾಗಿದೆ. ಅವರು ಪ್ರಧಾನಿ ಹುದ್ದೆಗೆ ಏರಿದ್ದು ವಿದೇಶಾಂಗ ನೀತಿ ದೃಷ್ಟಿಯಿಂದ ಅನುಕೂಲಕರವಾಗಿದೆ. ಆದರೆ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ನೀಡಿರುವ ಭರವಸೆ ಯಾವುದೂ ಈಡೇರುತ್ತಿಲ್ಲ ಎಂದು ಅವರು ಹೇಳಿದರು.<br /> <br /> ಸುದ್ದಿವಾಹಿನಿಯೊಂದಕ್ಕೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಅವರು, ‘ನೀತಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದಕ್ಕಿಂತ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದೇ ಸರ್ಕಾರಕ್ಕೆ ಮಹತ್ವವಾಗಿರುವಂತಿದೆ’ ಎಂದು ಟೀಕಿಸಿದರು.<br /> <br /> ಹೂಡಿಕೆದಾರರು ಸ್ಥಿರತೆ ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಬಯಸುತ್ತಾರೆ ಎಂದ ಅವರು, ಆರ್ಥಿಕ ತಜ್ಞ ದೀಪಕ್ ಪಾರೇಖ್ ಆರ್ಥಿಕ ನೀತಿಗಳು ತಳಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ವ್ಯಕ್ತಪಡಿಸಿದ್ದ ಆತಂಕವನ್ನು ಎಚ್ಚರಿಕೆಯ ಗಂಟೆ ಎಂಬುದಾಗಿ ವಿಶ್ಲೇಷಿಸಿದರು.<br /> ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಮೋದಿ ಸಾಕಷ್ಟು ಶ್ರಮ ವಹಿಸಿದ್ದಾರೆಯೇ ಎಂಬ ಪ್ರಶ್ನೆಗೆ ‘ಎಲ್ಲವೂ ಉತ್ಪ್ರೇಕ್ಷಿತಗೊಂಡಿವೆ’ ಎಂದರು.<br /> <br /> ‘ಅಂತಹ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತವೆ. ಆದರೆ ಅವು ವಾಸ್ತವಕ್ಕೆ ದೂರವಾಗಿರುತ್ತವೆ’ ಎಂದು ನುಡಿದರು.<br /> <br /> ವಿದೇಶಿ ಹೂಡಿಕೆದಾರರನ್ನು ದೂರ ಇರಿಸಿರುವ ತೆರಿಗೆ ಸಮಸ್ಯೆಗಳ ನಿರ್ವಹಣೆಯನ್ನೂ ಅವರು ಕಟುವಾಗಿ ಟೀಕಿಸಿದರು.<br /> ‘ಕ್ರೈಸ್ತರ ಮೇಲಿನ ದಾಳಿಗಳು, ಘರ್ ವಾಪಸಿ ಮತ್ತು ಲವ್ ಜಿಹಾದ್ ಚಳವಳಿಗಳಂತಹ ಘಟನೆಗಳು ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿದೆ’ ಎಂದು ಹೇಳಿದರು.<br /> <br /> ಪಕ್ಷದ ಸಂಸದರು ಮತ್ತು ಮುಖಂಡರ ಹೇಳಿಕೆಗಳು, ಬಲಪಂಥೀಯ ಸಂಘಟನೆಗಳ ಚಟುವಟಿಕೆಗಳಿಂದ ಉದ್ಭವವಾಗುತ್ತಿರುವ ಸಾಮಾಜಿಕ ಉದ್ವಿಗ್ನತೆ ಕುರಿತ ಮೋದಿ ಅವರ ಮೌನವನ್ನು ಅವರು ಖಂಡಿಸಿದರು.<br /> <br /> ‘ಸಾನಿಯಾ ಮಿರ್ಜಾ ಚಾಂಪಿಯನ್ಶಿಪ್ ಗೆದ್ದಾಗ ಟ್ವೀಟ್ ಮಾಡುತ್ತೀರಿ. ಅಥವಾ ಯಾರದ್ದಾದರೂ ಜನ್ಮದಿನಕ್ಕೆ ಶುಭಾಶಯ ಕೋರುತ್ತೀರಿ. ಆದರೆ ನೈತಿಕ ಪ್ರಶ್ನೆಗಳನ್ನು ಒಳಗೊಂಡಿರುವ ಸಂಗತಿಗಳಲ್ಲಿ ಯಾಕೆ ಹಾಗೆ ಮಾಡುವುದಿಲ್ಲ? ಅವರೇಕೆ ಮೌನ ವಹಿಸಿದ್ದಾರೆ ಎಂದು ಜನರು ಅನುಮಾನ ಪಡುತ್ತಾರೆ’ ಎಂದರು.<br /> <br /> ‘ಮೋದಿ, ಅಮಿತ್ ಷಾ ಮತ್ತು ಅರುಣ್ ಜೇಟ್ಲಿ ಪಕ್ಷವನ್ನು ನಡೆಸುತ್ತಿದ್ದಾರೆ. ಇದು ಪ್ರತಿಪಕ್ಷಗಳನ್ನು ಕೆರಳಿಸುತ್ತಿದ್ದರೆ, ಬಿಜೆಪಿ ಸದಸ್ಯರಲ್ಲಿಯೇ ದಿಗಿಲು ಹುಟ್ಟಿಸಿದೆ’ ಎಂದು ಅವರು ನುಡಿದರು.<br /> <br /> ‘ತಪ್ಪುಗಳಿಗೆ ಅವರೇ ಹೊಣೆಗಾರರು ಮತ್ತು ಅವರೇ ಸುಪ್ರೀಂಕೋರ್ಟ್. ಈ ಮೂವರು ನಾಯಕರಿಗೆ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ ಮತ್ತು ದೋಷ ಪರಿಹಾರದ ಕಾರ್ಯಗಳು ನಡೆಯುತ್ತಿಲ್ಲ’ ಎಂದು ಹೇಳಿದರು.<br /> <br /> ಒಬಾಮ ಅವರ ಭೇಟಿ ವೇಳೆ ತಮ್ಮದೇ ಹೆಸರುಳ್ಳ ದುಬಾರಿ ಸೂಟ್ ಧರಿಸಿದ್ದ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಮೋದಿ ಅದನ್ನು ಒಪ್ಪಿಕೊಂಡು ಏಕೆ ಧರಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ. ಗಾಂಧೀಜಿ ಅವರ ಹೆಸರನ್ನು ಬಳಸಿಕೊಂಡು ಅಂತಹ ಉಡುಪನ್ನು ಧರಿಸಬಾರದು’ ಎಂದರು.<br /> <br /> <strong>ಸ್ಪಷ್ಟತೆಯ ಕೊರತೆ: </strong>ಪಾಕಿಸ್ತಾನಕ್ಕೆ ಸಂಬಂಧಿಸಿದ ಮೋದಿ ಅವರ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿದ್ದು, ಜಟಿಲ ಸಮಸ್ಯೆಗೆ ತಮ್ಮದೇ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳುವ ಭ್ರಮೆ ಅವರಲ್ಲಿದೆ ಎಂದು ಶೌ ರಿ ಟೀಕಿಸಿದರು.<br /> <br /> <strong>ಬಿಜೆಪಿ ಟೀಕೆ: </strong>ಶೌರಿ ಅವರ ಹೇಳಿಕೆಗೆ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಶೌ ರಿ ಅವರು ‘ಕಷ್ಟಕಾಲಕ್ಕೆ ಆಗದ ಮಿತ್ರ’ ಮತ್ತು ತಮಗೆ ಸೂಕ್ತ ಸ್ಥಾನ ಸಿಗದಿರುವುದಕ್ಕೆ ಗೊಣಗಾಡುತ್ತಿರಬಹುದು ಎಂದು ಟೀಕಿಸಿದೆ.<br /> <br /> <strong>ಎಎಪಿ ಆಗ್ರಹ: </strong>ಅರುಣ್ ಶೌರಿ ಅವರ ಟೀಕೆಯನ್ನು ಸ್ವಾಗತಿಸಿರುವ ಆಮ್ ಆದ್ಮಿ ಪಕ್ಷ, ‘ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ, ಐಎಎನ್ಎಸ್): </strong>ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿಯ ಹಿರಿಯ ನಾಯಕ, ಪತ್ರಕರ್ತ ಅರುಣ್ ಶೌ ರಿ ಅವರು, ಕೇಂದ್ರದ ಆರ್ಥಿಕ ನೀತಿ ಗುರಿಯಿಲ್ಲದ್ದು ಮತ್ತು ಈಗಿನ ಸಾಮಾಜಿಕ ವಾತಾವರಣ ಅಲ್ಪಸಂಖ್ಯಾತರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಕಟುವಾಗಿ ಟೀಕಿಸಿದರು.<br /> <br /> ಮೋದಿ ಸರ್ಕಾರದ ಒಂದು ವರ್ಷದ ಆಡಳಿತ ಕೆಲವು ಭಾಗಗಳಲ್ಲಿ ಉತ್ತಮವಾಗಿದೆ. ಅವರು ಪ್ರಧಾನಿ ಹುದ್ದೆಗೆ ಏರಿದ್ದು ವಿದೇಶಾಂಗ ನೀತಿ ದೃಷ್ಟಿಯಿಂದ ಅನುಕೂಲಕರವಾಗಿದೆ. ಆದರೆ ಅವರು ಆರ್ಥಿಕತೆಗೆ ಸಂಬಂಧಿಸಿದಂತೆ ನೀಡಿರುವ ಭರವಸೆ ಯಾವುದೂ ಈಡೇರುತ್ತಿಲ್ಲ ಎಂದು ಅವರು ಹೇಳಿದರು.<br /> <br /> ಸುದ್ದಿವಾಹಿನಿಯೊಂದಕ್ಕೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಅವರು, ‘ನೀತಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದಕ್ಕಿಂತ ಮಾಧ್ಯಮಗಳಲ್ಲಿ ಸುದ್ದಿ ಮಾಡುವುದೇ ಸರ್ಕಾರಕ್ಕೆ ಮಹತ್ವವಾಗಿರುವಂತಿದೆ’ ಎಂದು ಟೀಕಿಸಿದರು.<br /> <br /> ಹೂಡಿಕೆದಾರರು ಸ್ಥಿರತೆ ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಬಯಸುತ್ತಾರೆ ಎಂದ ಅವರು, ಆರ್ಥಿಕ ತಜ್ಞ ದೀಪಕ್ ಪಾರೇಖ್ ಆರ್ಥಿಕ ನೀತಿಗಳು ತಳಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ವ್ಯಕ್ತಪಡಿಸಿದ್ದ ಆತಂಕವನ್ನು ಎಚ್ಚರಿಕೆಯ ಗಂಟೆ ಎಂಬುದಾಗಿ ವಿಶ್ಲೇಷಿಸಿದರು.<br /> ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಮೋದಿ ಸಾಕಷ್ಟು ಶ್ರಮ ವಹಿಸಿದ್ದಾರೆಯೇ ಎಂಬ ಪ್ರಶ್ನೆಗೆ ‘ಎಲ್ಲವೂ ಉತ್ಪ್ರೇಕ್ಷಿತಗೊಂಡಿವೆ’ ಎಂದರು.<br /> <br /> ‘ಅಂತಹ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತವೆ. ಆದರೆ ಅವು ವಾಸ್ತವಕ್ಕೆ ದೂರವಾಗಿರುತ್ತವೆ’ ಎಂದು ನುಡಿದರು.<br /> <br /> ವಿದೇಶಿ ಹೂಡಿಕೆದಾರರನ್ನು ದೂರ ಇರಿಸಿರುವ ತೆರಿಗೆ ಸಮಸ್ಯೆಗಳ ನಿರ್ವಹಣೆಯನ್ನೂ ಅವರು ಕಟುವಾಗಿ ಟೀಕಿಸಿದರು.<br /> ‘ಕ್ರೈಸ್ತರ ಮೇಲಿನ ದಾಳಿಗಳು, ಘರ್ ವಾಪಸಿ ಮತ್ತು ಲವ್ ಜಿಹಾದ್ ಚಳವಳಿಗಳಂತಹ ಘಟನೆಗಳು ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಮೂಡಿಸಿದೆ’ ಎಂದು ಹೇಳಿದರು.<br /> <br /> ಪಕ್ಷದ ಸಂಸದರು ಮತ್ತು ಮುಖಂಡರ ಹೇಳಿಕೆಗಳು, ಬಲಪಂಥೀಯ ಸಂಘಟನೆಗಳ ಚಟುವಟಿಕೆಗಳಿಂದ ಉದ್ಭವವಾಗುತ್ತಿರುವ ಸಾಮಾಜಿಕ ಉದ್ವಿಗ್ನತೆ ಕುರಿತ ಮೋದಿ ಅವರ ಮೌನವನ್ನು ಅವರು ಖಂಡಿಸಿದರು.<br /> <br /> ‘ಸಾನಿಯಾ ಮಿರ್ಜಾ ಚಾಂಪಿಯನ್ಶಿಪ್ ಗೆದ್ದಾಗ ಟ್ವೀಟ್ ಮಾಡುತ್ತೀರಿ. ಅಥವಾ ಯಾರದ್ದಾದರೂ ಜನ್ಮದಿನಕ್ಕೆ ಶುಭಾಶಯ ಕೋರುತ್ತೀರಿ. ಆದರೆ ನೈತಿಕ ಪ್ರಶ್ನೆಗಳನ್ನು ಒಳಗೊಂಡಿರುವ ಸಂಗತಿಗಳಲ್ಲಿ ಯಾಕೆ ಹಾಗೆ ಮಾಡುವುದಿಲ್ಲ? ಅವರೇಕೆ ಮೌನ ವಹಿಸಿದ್ದಾರೆ ಎಂದು ಜನರು ಅನುಮಾನ ಪಡುತ್ತಾರೆ’ ಎಂದರು.<br /> <br /> ‘ಮೋದಿ, ಅಮಿತ್ ಷಾ ಮತ್ತು ಅರುಣ್ ಜೇಟ್ಲಿ ಪಕ್ಷವನ್ನು ನಡೆಸುತ್ತಿದ್ದಾರೆ. ಇದು ಪ್ರತಿಪಕ್ಷಗಳನ್ನು ಕೆರಳಿಸುತ್ತಿದ್ದರೆ, ಬಿಜೆಪಿ ಸದಸ್ಯರಲ್ಲಿಯೇ ದಿಗಿಲು ಹುಟ್ಟಿಸಿದೆ’ ಎಂದು ಅವರು ನುಡಿದರು.<br /> <br /> ‘ತಪ್ಪುಗಳಿಗೆ ಅವರೇ ಹೊಣೆಗಾರರು ಮತ್ತು ಅವರೇ ಸುಪ್ರೀಂಕೋರ್ಟ್. ಈ ಮೂವರು ನಾಯಕರಿಗೆ ಸೂಕ್ತ ಪ್ರತಿಕ್ರಿಯೆ ದೊರಕುತ್ತಿಲ್ಲ ಮತ್ತು ದೋಷ ಪರಿಹಾರದ ಕಾರ್ಯಗಳು ನಡೆಯುತ್ತಿಲ್ಲ’ ಎಂದು ಹೇಳಿದರು.<br /> <br /> ಒಬಾಮ ಅವರ ಭೇಟಿ ವೇಳೆ ತಮ್ಮದೇ ಹೆಸರುಳ್ಳ ದುಬಾರಿ ಸೂಟ್ ಧರಿಸಿದ್ದ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಮೋದಿ ಅದನ್ನು ಒಪ್ಪಿಕೊಂಡು ಏಕೆ ಧರಿಸಿದರು ಎಂದು ನನಗೆ ಅರ್ಥವಾಗುತ್ತಿಲ್ಲ. ಗಾಂಧೀಜಿ ಅವರ ಹೆಸರನ್ನು ಬಳಸಿಕೊಂಡು ಅಂತಹ ಉಡುಪನ್ನು ಧರಿಸಬಾರದು’ ಎಂದರು.<br /> <br /> <strong>ಸ್ಪಷ್ಟತೆಯ ಕೊರತೆ: </strong>ಪಾಕಿಸ್ತಾನಕ್ಕೆ ಸಂಬಂಧಿಸಿದ ಮೋದಿ ಅವರ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿದ್ದು, ಜಟಿಲ ಸಮಸ್ಯೆಗೆ ತಮ್ಮದೇ ದೃಷ್ಟಿಕೋನದಲ್ಲಿ ಪರಿಹಾರ ಕಂಡುಕೊಳ್ಳುವ ಭ್ರಮೆ ಅವರಲ್ಲಿದೆ ಎಂದು ಶೌ ರಿ ಟೀಕಿಸಿದರು.<br /> <br /> <strong>ಬಿಜೆಪಿ ಟೀಕೆ: </strong>ಶೌರಿ ಅವರ ಹೇಳಿಕೆಗೆ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಶೌ ರಿ ಅವರು ‘ಕಷ್ಟಕಾಲಕ್ಕೆ ಆಗದ ಮಿತ್ರ’ ಮತ್ತು ತಮಗೆ ಸೂಕ್ತ ಸ್ಥಾನ ಸಿಗದಿರುವುದಕ್ಕೆ ಗೊಣಗಾಡುತ್ತಿರಬಹುದು ಎಂದು ಟೀಕಿಸಿದೆ.<br /> <br /> <strong>ಎಎಪಿ ಆಗ್ರಹ: </strong>ಅರುಣ್ ಶೌರಿ ಅವರ ಟೀಕೆಯನ್ನು ಸ್ವಾಗತಿಸಿರುವ ಆಮ್ ಆದ್ಮಿ ಪಕ್ಷ, ‘ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>