ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಶ್ರಯದಿಂದ ಕಲೆ ಬೆಳೆಯಿತು: ರಾಮಚಂದ್ರ ಗುಹಾ

Last Updated 21 ಜೂನ್ 2014, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದಲ್ಲಿ ಕಲೆಗಳಿಗೆ ರಾಜರ ಪ್ರೋತ್ಸಾಹ ಹೆಚ್ಚಾಗಿತ್ತು. ಹೈದರಾ­ಬಾದ್‌ ನಿಜಾಮರ ಆಶ್ರಯ­ದಲ್ಲಿದ್ದ ರಾಜಾ ದೀನ್‌ ದಯಾಳ್‌ ಅವರ ಛಾಯಾಚಿತ್ರಗಳಲ್ಲಿ ಇತಿಹಾಸ ದಾಖಲಾಗಿದೆ’ ಎಂದು ಲೇಖಕ ರಾಮಚಂದ್ರ ಗುಹಾ ಹೇಳಿದರು.

ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ನಗರದ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್ಸ್‌ನಲ್ಲಿ ಶನಿ­ವಾರ­ದಿಂದ ಆಯೋಜಿಸಿರುವ ರಾಜಾ ದೀನ್‌ ದಯಾಳ್‌ ಅವರ ಛಾಯಾ­ಚಿತ್ರಗಳ ಪ್ರದರ್ಶನ ಉದ್ಘಾ­ಟಿಸಿ ಅವರು ಮಾತನಾಡಿದರು.
‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀ­ತದ ಬೆಳವಣಿಗೆಗೆ ನಿಜಾಮರ ಪ್ರೋತ್ಸಾಹ ಹೆಚ್ಚಾಗಿತ್ತು. ಅದೇ ರೀತಿ ಇತರೆ ಕಲೆಗಳಿಗೂ ರಾಜಾಶ್ರಯದಿಂದ ಹೆಚ್ಚು ಅನುಕೂಲವಾಗಿದೆ’ ಎಂದರು.

‘ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು 1989ರಲ್ಲಿ ದೀನ್‌ ದಯಾಳ್‌ ಅವರ ಕುಟುಂಬ ಸದಸ್ಯ­ರಿಂದ ಅಪರೂಪದ ಛಾಯಾಚಿತ್ರ­ಗ­ಳನ್ನು ಸಂಗ್ರಹಿಸಿದೆ. ಈವರೆಗೆ ದೆಹಲಿ, ಮುಂಬೈ, ಭೋಪಾಲ್‌, ಗುವಾಹಟಿ, ಕೋಲ್ಕತ್ತಾ ಸೇರಿ ಅನೇಕ ಕಡೆ ಛಾಯಾ­ಚಿತ್ರಗಳ ಪ್ರದರ್ಶನ ಏರ್ಪಡಿಸ­ಲಾ­ಗಿದೆ’ ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ದಕ್ಷಿಣ ಪ್ರಾದೇ­ಶಿಕ ವಿಭಾಗದ ಕಾರ್ಯ­ನಿರ್ವಾ­ಹಕ ನಿರ್ದೇಶಕ ವಿಕ್ರಮ್‌ ಸಂಪತ್‌ ಹೇಳಿದರು.

1880ರಲ್ಲಿ ತೆಗೆದಿರುವ ವಿಜಾ­ಪುರದ ಬಾರಾ ಕಮಾನು, ಗುಲ್ಬ­ರ್ಗದ ಕೋಟೆಬೀದಿ, 1890ರಲ್ಲಿ ತೆಗೆದಿರುವ ಗುಲ್ಬರ್ಗದ ಮಹಾ ಕಮಾನಿನ ಛಾಯಾ­ಚಿತ್ರ­ಗಳು, ಹೈದರಾ­ಬಾದ್‌ ನಿಜಾಮರ ಕುಟುಂಬ ಸದಸ್ಯರ ಛಾಯಾ­ಚಿತ್ರಗಳು, ಬ್ರಿಟಿಷ್‌ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಛಾಯಾಚಿತ್ರಗಳು ­ಸೇರಿ 168 ಅಪರೂಪದ ಛಾಯಾ­ಚಿತ್ರ­ಪ್ರದರ್ಶನದಲ್ಲಿವೆ. ಪ್ರದರ್ಶನಕ್ಕೆ ಪ್ರವೇಶ ಉಚಿತ. ಜುಲೈ 20ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ­ಯ­ವ­ರೆಗೆ ಪ್ರದ­ರ್ಶನ  ವೀಕ್ಷಣೆಗೆ ಮುಕ್ತವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT