ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ.21 ಮತ್ತು 22 ರಂದು ಹೊಸಕೋಟೆಯಲ್ಲಿ ನಡೆಯಲಿದ್ದು ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಹೊರತರಲಾಗುವುದು. ಸಂಚಿಕೆಗಾಗಿ ಜಿಲ್ಲೆಯ ಸಾಹಿತ್ಯ ಆಸಕ್ತರಿಂದ ಲೇಖನ, ಕವನ, ಚುಟುಕ ಆಹ್ವಾನಿಸಲಾಗಿದೆ.
ಬರಹಗಳನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಹೊಸಕೋಟೆ ಇಲ್ಲಿಗೆ ಜ.30 ರ ಒಳಗೆ ಕಳುಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬೈಲಾಂಜಿನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.